ವಿಟ್ಲದ ನಾಲ್ಕು ಮಾರ್ಗದಲ್ಲಿ ಸೋಮವಾರ ರಾತ್ರಿ ತರಕಾರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ನಗದು ಹಾಗೂ ವಸ್ತುಗಳು ಸಂಪೂರ್ಣವಾಗಿ ನಷ್ಟವಾಗಿದೆ.
ಜಾಹೀರಾತು
ವಿಟ್ಲದ ಮಂಗಳೂರು ರಸ್ತೆಯಲ್ಲಿರುವ ಬಿ.ಕೆ ತರಕಾರಿ ಅಂಗಡಿಯಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೆ ವಿಟ್ಲ ಪೊಲೀಸರು ಆಗಮಿಸಿ ಅಂಗಡಿ ಬೀಗ ಮುರಿದು ವಸ್ತುಗಳನ್ನು ಹೊರ ಹಾಕಿದ್ದಾರೆ. ಪಕ್ಕದಲ್ಲಿರುವ ಬೇಕರಿ ಅಂಗಡಿಗೂ ಬೆಂಕಿ ಆವರಿಸಿದೆ. ತರಕಾರಿ ಅಂಗಡಿಯಲ್ಲಿದ್ದ ನಗದು ಹಾಗೂ ತರಕಾರಿ, ಇನ್ನಿತರ ಸಾಮಗ್ರಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ವಿಟ್ಲದಲ್ಲಿ ತರಕಾರಿ ಅಂಗಡಿಗೆ ಬೆಂಕಿ"
Be the first to comment on "ವಿಟ್ಲದಲ್ಲಿ ತರಕಾರಿ ಅಂಗಡಿಗೆ ಬೆಂಕಿ"