ವಿಟ್ಲ

ಬಟ್ಟೆ ತೊಳೆಯಲು ತೆರಳಿದ ವ್ಯಕ್ತಿ ನೀರುಪಾಲು

ಕೃಷಿ ಚಟುವಟಿಕೆಯ ನೀರು ಸಂಗ್ರಹದ ಹೊಂಡಕ್ಕೆ ಬಟ್ಟೆ ತೊಳೆಯಲು ಆಗಮಿಸಿದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಬಾಂಡೀಲು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನೀರುಪಾಲಾಧವರಿಗಾಗಿ ಶೋಧ

ರಾದುಕಟ್ಟೆ ನಿವಾಸಿ ಅಬ್ದುಲ್ ರಝಾಕ್ (42) ಮೃತ ವ್ಯಕ್ತಿ. ಸಂಜೆ ಆಗಮಿಸಿದ ಇವರು ಬಟ್ಟೆ ತೊಳೆಯಲು ಆಗಮಿಸಿದ್ದು, ಚಾಪೆ ನೀರಿನಲ್ಲಿ ಹೋಯಿತು ಎಂಬ ಕಾರಣಕ್ಕೆ ತರಲು ಮುಂದೆ ಹೋದ ಸಂದರ್ಭ ನೀರುಪಾಲಾಧರು.

ಜಾಹೀರಾತು

ಕೂಡಲೇ ಕಾಶಿಮಠ ಪ್ರತಾಪ, ಉಕ್ಕುಡ ಹರೀಶ್, ಸುರೇಶ್ ಅವರ ತಂಡ ನೀರಿನಲ್ಲಿ ಮುಳುಗಿ ಹುಡುಕುವ ಪ್ರಯತ್ನ ಮಾಡಿದರು. ಕಾಸಿಮ್ ಗೂಡಿನಬಳಿ, ಮೊಹಮ್ಮದ್ ಗೂಡಿನಬಳಿ, ಹಾರೀಸ್ ಗೊಡಿನಬಳಿ, ಸಂಶೀರ್, ಇರ್ಷಾದ್ ಮತ್ತಿತರರ ತಂಡ ಕಾರ್ಯಚರಣೆ ಮುಂದುವರಿಸಿದರು. ವಿಟ್ಲ ಪೋಲೀಸರು, ಪುತ್ತೂರು ಅಗ್ನಿಶಾಮಕದಳದವರು ಸಹಕಾರ ನೀಡಿದರು. ರಾತ್ರಿ ವೇಳೆ ಮೃತದೇಹ ಪತ್ತೆಯಾಯಿತು. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ