ನಿಷೇಧಾಜ್ಞೆ ಸಂದರ್ಭ ಪಾಸ್ ಬೇಕಿದ್ದರೆ ಸಹಾಯಕ ಕಮೀಷನರ್ ಸಂಪರ್ಕಿಸಿ

ಕೋವಿಡ್ 19 (ಕೊರೊನಾ ವೈರಾಣು ಕಾಯಿಲೆ 2019) ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರಂತರವಾಗಿ ಯಾವುದೇ ಅಡಚಣೆ ಇಲ್ಲದೆ ಅವಶ್ಯ ಸಾಮಾಗ್ರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಮಂಗಳೂರು ಸಹಾಯಕ ಕಮೀಷನರ್ ಅವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶವನ್ನು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಸ್ ಬೇಕಿದ್ದವರು ಮಂಗಳೂರಿನಲ್ಲಿರುವ ಸಹಾಯಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಸಹಾಯಕ ಆಯುಕ್ತರು ಅವರ ಉಪವಿಭಾಗ ವ್ಯಾಪ್ತಿಯಲ್ಲಿ ಅನುಮತಿ ಪತ್ರವನ್ನು ವಿತರಿಸುವಾಗ ಸಂಬಂಧಿಸಿದ ಸೇವೆ ಅತಿ ಅವಶ್ಯವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳತಕ್ಕದ್ದು ಎಂದು ಡಿ.ಸಿ. ತಿಳಿಸಿದ್ದು, ಅನುಮತಿ ಪತ್ರ ಪಡೆಯಲು ಅರ್ಹರು ಇವರು.

ಖಾಸಗಿ ಸೆಕ್ಯುರಿಟಿ ಗಾರ್ಡ್ಸ್, ಪೆಟ್ರೋಲ್, ಗ್ಯಾಸ್, ಎಲ್.ಪಿ.ಜಿ. ರಿಟೇಲ್ ನೌಕರರು, ಬ್ಯಾಂಕ್, ಎಟಿಎಂ, ವಿಮಾ ಕಂಪನಿ ನೌಕರರು, ಆಹಾರ ಪದಾರ್ಥಗಳ ಹೋಂ ಡೆಲಿವರಿ ಏಜಂಟರು, ಆನ್ಲೈನ್ ಔಷಧಗಳ ಕಂಪನಿಗಳ ಮತ್ತು ಇ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಕೆಲಸ ಮಾಡುವವರು, ಆಹಾರ, ಪಡಿತರ ಅಥವಾ ದಿನಸಿ ಅಂಗಡಿಗಳು, ಹಣ್ಣು ಹಂಪಲು, ತರಕಾರಿ ಅಂಗಡಿಗಳು, ಡೈರಿಗಳು, ಮಾಂಸ ಮತ್ತು ಮೀನಿನ ಅಂಗಡಿಗಳ ಪ್ರಾಣಿಗಳ ಮೇವು ಅಂಗಡಿಗಳ ಸಿಬ್ಬಂದಿಗಳು, ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂ, ಲ್ಯಾಬ್, ಆಂಬುಲೆನ್ಸ್ ಸೇವೆ ಇತ್ಯಾದಿ ವೈದ್ಯಕೀಯ ಸೇವೆಗಳ ಸಿಬ್ಬಂದಿ, ಟೆಲಿಕಾಂ, ಇಂಟರ್ನೆಟ್ ಸೇವೆ ಸಿಬ್ಬಂದಿ, ಮಾಹಿತಿ ತಂತ್ರಜ್ಞಾನ, ಅಗತ್ಯ ಸೇವೆ ನಿರ್ವಹಿಸುವ ಐಟಿ ಸಕ್ರಿಯಗೊಳಿಸಿದ ಸೇವೆಗಳ ಸಿಬ್ಬಂದಿ, ಶಕ್ತಿ ಉತ್ಪಾದನೆ, ಪ್ರಸರಣ, ವಿತರಣಾ ಘಟಕ ಸಿಬ್ಬಂದಿ, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮು ಸೇವೆಗಳ ನೌಕರರು, ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳ ಸಿಬ್ಬಂದಿ, ಅಗತ್ಯ ವಸ್ತು ಸರಕು ಸಾಗಣೆ ಸಿಬ್ಬಂದಿಗಳಿಗೆ ಪಾಸ್ (ಅನುಮತಿ ಪತ್ರ) ವಿತರಿಸುವ ಅಧಿಕಾರ ಮಂಗಳೂರಿನ ಸಹಾಯಕ ಕಮೀಷನರ್ ಅವರಿಗೆ ಮಾತ್ರ ಇದೆ. ಅನುಮತಿ ಪತ್ರಗಳನ್ನು ವ್ಯಕ್ತಿ, ವಾಹನಗಳಿಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಜಿ ನೋಂದಣಿ ಹೊಂದಿದ ಸರಕಾರಿ ವಾಹನಗಳು, ಸರಕು ಸಾಗಾಟ ವಾಹನ, ಇಲಾಖಾ ಗುರುತಿನ ಚೀಟಿ ಹೊಂದಿದ ಸರಕಾರಿ ನೌಕರರ ವಾಹನಗಳಿಗೆ ಅನುಮತಿ ಪತ್ರ ಅವಶ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ನಿಷೇಧಾಜ್ಞೆ ಸಂದರ್ಭ ಪಾಸ್ ಬೇಕಿದ್ದರೆ ಸಹಾಯಕ ಕಮೀಷನರ್ ಸಂಪರ್ಕಿಸಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*