ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನ ನೂತನ ಅದ್ಯಕ್ಷರಾಗಿ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಆಯ್ಕೆಯಾಗಿದ್ದಾರೆ . ಸೋಮವಾರ ಬಿ.ಸಿ.ರೋಡ್ ನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು.
![](https://i0.wp.com/bantwalnews.com/wp-content/uploads/2020/02/7a3fba56-ec93-425e-94a9-7b51f5119d6e.jpg?resize=648%2C633&ssl=1)
ಮುಹಮ್ಮದ್ ಹನೀಫ್ ಗೋಳ್ತಮಜಲು
ಉಪಾಧ್ಯಕ್ಷರುಗಳಾಗಿ ಎಂ.ಎಸ್. ಮುಹಮ್ಮದ್. ಬಿ.ಎಂ.ಅಬ್ಬಾಸ್ ಆಲಿ, ಮಹಮ್ಮದ್ ಶಫಿ ಸಜಿಪ, ಮತ್ತು ಬಾವಾ ಫರಂಗಿಪೇಟೆ. ಪ್ರದಾನ ಕಾರ್ಯದರ್ಶಿಯಾಗಿ ನೋಟರಿ ಅಬೂಬಕರ್ ವಿಟ್ಲ, ಜೊತೆ ಕಾರ್ಯದರ್ಶಿಯಾಗಿ ಖಲೀಲುಲ್ಲಾ ಬಂಟ್ವಾಳ, ಯೂಸುಫ್ ಕರಂದಾಡಿ, ಕೋಶಾಧಿಕಾರಿಯಾಗಿ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ನೆಹರುನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಎಸ್. ಮುಹಮ್ಮದ್ ಕಡೇಶಿವಾಲಯ, ಶೇಕ್ ರಹಮತುಲ್ಲಾ ಹಾಗೂ ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ ಅವರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರಶೀದ್ ವಿಟ್ಲ, ಸುಲೈಮಾನ್ ಹಾಜಿ ಕಲ್ಲಡ್ಕ, ಅಬ್ದುಲ್ ರಝಾಕ್ ಪಜೀರು, ಸುಲೈಮಾನ್ ಹಾಜಿ ಸಿಂಗಾರಿ, ರಫಿಕ್ ಹಾಜಿ ಸುರಿಬೈಲು, ಅಸಿಫ್ ಇಕ್ಬಾಲ್ ಫರಂಗಿಪೇಟೆ, ರಫೀಕ್ ಹಾಜಿ ಆಲಡ್ಕ, ಎಸ್.ಕೆ.ಕಾದರ್ ಹಾಜಿ ಮುಡಿಪು, ಬಿ.ಎ.ಮುಹಮ್ಮದ್ ಬಂಟ್ವಾಳ, ಹಕೀಮ್ ಪರ್ತಿಪಾಡಿ, ಅಬ್ದುಲ್ ರಹಿಮಾನ್ ಹಾಜಿ ಕೇಪು, ಕೆ.ಕೆ.ಸುಲೈಮಾನ್ ಫೈಝಿ ಕಣಿಯೂರು ಹಾಗೂ ಅಶ್ರಫ್ ಮೂಲರಪಟ್ನಇವರನ್ನು ಸರ್ವಾನುಮತದಿಂದ ಆರಿಸಲಾಯಿತು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅದ್ಯಕ್ಷರಾಗಿ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು"