ವಿಟ್ಲ

ರಥೋತ್ಸವ ಜೊತೆಗೆ ತುಳುನಾಡ ಜಾತ್ರೆ: ಒಡಿಯೂರಿನಲ್ಲಿ ಫೆ.3, 4ರಂದು ಸಂಭ್ರಮದ ಕಾರ್ಯಕ್ರಮ

ಫೆಬ್ರವರಿ 3 ಮತ್ತು 4 ಸಂಭ್ರಮದ ಶ್ರೀ ಒಡಿಯೂರು ರಥೋತ್ಸವತುಳುನಾಡ ಜಾತ್ರೆ ನಡೆಯಲಿದೆ.

ಜಾಹೀರಾತು

ಮೂರು ದಶಕಗಳಿಂದ ತುಳು ಭಾಷೆಸಂಸ್ಕೃತಿ ಉಳಿಸಿ ಬೆಳೆಸಿ ಪೋಸಿಸುವ ನಿಟ್ಟಿನಲ್ಲಿ ಎಲ್ಲರಲ್ಲೂ ಕಾಳಜಿ ಮೂಡಿಸುವ ಕೆಲಸ ಶ್ರೀ ಸಂಸ್ಥಾನದಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ನಡೆಯುತ್ತಿದೆ.

ಫೆಬ್ರವರಿ 3 ಮತ್ತು 4ರಂದು ಶ್ರೀ ಒಡಿಯೂರು ರಥೋತ್ಸವತುಳುನಾಡ ಜಾತ್ರೆ ಸಂಪನ್ನಗೊಳ್ಳಲಿದೆ. ತುಳು ಭಾಷೆ ಸಂಸ್ಕೃತಿಯ ಜಾಗೃತಿಗಾಗಿ 3ರಂದು ಸೋಮವಾರ ಇಪ್ಪತ್ತನೆತುಳು ಸಾಹಿತ್ಯ ಸಮ್ಮೇಳನಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಸುಬ್ಬಣ್ಣ ರೈ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ತುಳುನಾಡ್ದ ಜಾತ್ರೆಯ ಸಾಹಿತ್ಯ ಹಬ್ಬವನ್ನು ಪರಮಪೂಜ್ಯ ಒಡಿಯೂರು ಶ್ರೀಗಳವರು ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ.ಎಸ್. ಯಡಪಡಿತ್ತಾಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್ ಸಾಲ್ಯಾನ್ ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿರುವರು.

ಅನಂತರ ಜರಗುವ ಋಷಿಕೃಷಿಪರಪೋಕುದ ಸಂಸ್ಕೃತಿ ಎಂಬತುಳಿಪುಗೋಷ್ಠಿಯಲ್ಲಿ  ಋಷಿ ಸಂಸ್ಕೃತಿಯ ಬಗ್ಗೆ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಚಾಲಕ ಡಾ. ಗಣನಾಥ ಶೆಟ್ಟಿ ಎಕ್ಕಾರ್, ಕೃಷಿ ಸಂಸ್ಕೃತಿನಿವೃತ್ತ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲ, ಪರಪೋಕುದ ಸಂಸ್ಕೃತಿವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ ಇವರು ಪ್ರಬಂಧ ಮಂಡಿಸುವರು.

ಜಾಹೀರಾತು

ಅಪರಾಹ್ಣ ಕವಿಕಾವ್ಯಪದೊಚಿತ್ರೊನಲಿಕೆ ಎಂಬ ಕವಿಗೋಷ್ಠಿಯಲ್ಲಿ ಮಲಾರು ಜಯರಾಮ ರೈ, ಹರೀಶ್ ಶೆಟ್ಟಿ ಸೂಡ, ವಿಶ್ವನಾಥ ಕುಲಾಲ್ ಮಿತ್ತೂರು, ಪೂವಪ್ಪ ನೆರಳಕಟ್ಟೆ, ರಾಜಶ್ರೀ ಟಿ. ರೈ, ಆಶಾ ದಿಲೀಪ್ ಸುಳ್ಯಮೆ ಭಾಗವಹಿಸಿ ಕಾವ್ಯ ವಾಚಿಸುವರು. ರವಿರಾಜ್ ಶೆಟ್ಟಿ ಒಡಿಯೂರು ಸಂಗೀತ ನೀಡಲಿದ್ದಾರೆ. ಗಣೇಶ್ ಸೋಮಯಾಜಿ ಮತ್ತು ಶರತ್ ಹೊಳ್ಳ ಚಿತ್ರ ಬಿಡಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ.

ಒಡಿಯೂರು ಶ್ರೀಗಳು ಮತ್ತು ಸಾಧ್ವಿ ಶ್ರೀ ಮಾತಾನಂದಮಯೀಯವರ ಉಪಸ್ಥಿತಿಯಲ್ಲಿ ಜರಗುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ, ಅಖಿಲ ಭಾರತ ತುಳು ಒಕ್ಕೂಟದ ಕಾರ್ಯದರ್ಶಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ಶ್ರೀ ಸಂಸ್ಥಾನದ ವತಿಯಿಂದ ಜಗದೀಶ ಶೆಟ್ಟಿ ಬಿಜೈ (ಯೋಗ), ಕಮಲಾಕ್ಷ ಬಂಗೇರ ಹರಿವೇಕಳ(ಮಾಜಿ ಸೈನಿಕಮುಳುಗುತಜ್ಞ), ಲಕ್ಷ್ಮೀ ಬೇಡಗುಡ್ಡೆ (ನಾಟಿವೈದ್ಯೆ), ಶ್ರೀ ಬಾಲಕೃಷ್ಣ ಶೆಟ್ಟಿ ಪಾವೂರು (ಬೆನ್ನಿ), ಕುಟ್ಟಿ ನಲಿಕೆ (ದೈವಾರಾಧನೆ) ಹೀಗೆ ಐವರು ಸಾಧಕರಿಗೆತುಳುಸಿರಿಪ್ರಶಸ್ತಿ ನೀಡಿ ಪೂಜ್ಯ ಶ್ರೀಗಳವರು ಗೌರವಿಸುವರು.

ಜಾಹೀರಾತು

ಸಂಜೆ ಶಾರದಾ ಆರ್ಟ್ಸ್ ಐಸಿರಿ ಕಲಾವಿದರು, ಮಂಜೇಶ್ವರ ಅವರಿಂದಗಿರಿಗಿಟ್ ಗಿರಿಧರೆತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸಮಾರಂಭದಲ್ಲಿ ಶ್ರೀ ದತ್ತ ತುಳು ಜಾನಪದ ಮತ್ತು ಇತಿಹಾಸ ಅಧ್ಯಯನ ಕೇಂದ್ರ, ಹಿರ್ಗಾನ, ಕಾರ್ಕಳ ಇವರಿಂದ ತುಳುನಾಡಿನ ಹಳೆಯ ಪುಸ್ತಕಗಳ, ವಸ್ತುಗಳ, ನಾಣ್ಯಗಳ ಪ್ರದರ್ಶನ ನಡೆಯಲಿದೆ.

ಶ್ರೀ ಒಡಿಯೂರು ರಥೋತ್ಸವ:

ಒಡಿಯೂರು ಶ್ರೀ ಸಂಸ್ಥಾನದ ಪ್ರತಿಷ್ಠಾ ಮುಹೂರ್ತವನ್ನು ಲಕ್ಷಿಸಿ ತಿಥಿಗನುಗುಣವಾಗಿ ರಥೋತ್ಸವವಾಗಿ ಆಚರಿಸಲಾಗುತ್ತದೆ. ಒಡಿಯೂರು ಶ್ರೀ ಸಂಸ್ಥಾನ ಸ್ಥಾಪನೆಗೊಂಡು ೩೧ನೇ ವರ್ಷದ ವಾರ್ಷಿಕ ಹಬ್ಬ, ಶ್ರೀ ಒಡಿಯೂರು ರಥೋತ್ಸವ ಜರಗುತ್ತಿರುವುದು ವಿಶೇಷ. ಅಂದು ಪೂರ್ವಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನಗೊಳ್ಳಲಿದೆ.

ಜಾಹೀರಾತು

ಪೂಜ್ಯ ಶ್ರೀಗಳವರು, ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ ಪೂರ್ವಾಹ್ನ ಜರಗುವ ಧರ್ಮಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೆಪ್ಪಾಡಿಗುತ್ತು, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಅಂಕಲೇಶ್ವರದ ಹೈಟೆಕ್   ಇಲೆಕ್ಟ್ರಿಫಿಕೇಶನ್ ಇಂಜಿನಿಯರಿಂಗ್‌ನ ಆಡಳಿತ ನಿರ್ದೇಶಕ ರವಿನಾಥ್ ವಿ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

 ಕಾರ್ಯಕ್ರಮದಲ್ಲಿ ಅಂತರ್‌ರಾಷ್ಟ್ರೀಯ ಕ್ರೀಡಾಪಟು ಪಟ್ಲಗುತ್ತು ಅನೀಶ್ ಶೆಟ್ಟಿಯವರಿಗೆ ಗುರುದೇವಾನುಗ್ರಹ ಯುಪುರಸ್ಕಾರ ನೀಡಿ ಶ್ರೀಗಳವರು ಅನುಗ್ರಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯ ವಿದ್ಯಾನಿಲಯ (ರಿ.), ಕುಂಬಳೆ ಅವರಿಂದನೃತ್ಯ ಸಂಭ್ರಮಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಮತ್ತು ಬಲಗದವರಿಂದಭಕ್ತಿಗಾನ ವೈಭವಜರಗಲಿದೆ.

ಜಾಹೀರಾತು

ರಾತ್ರಿ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ 12 ಕಿ.ಮೀ. ರಥಯಾತ್ರೆ ಕಣ್ಣಿಗೆ ಹಬ್ಬವಾಗಿ ಜನಮನವನ್ನು ಆಕರ್ಷಿಸುವ ಉತ್ಸವವಾಗಿ ಮೂಡಿಬರಲಿದೆ. ಸುಸಂದರ್ಭ ಮಿತ್ತನಡ್ಕದಲ್ಲಿ ಹಿಂದೂ ಸೇವಾ ಸಮಿತಿ ಮಿತ್ತನಡ್ಕ ಇವರ ಪ್ರಾಯೋಜಕತ್ವದಲ್ಲಿ ಸಿಂಚನ ಮ್ಯೂಸಿಕಲ್ಸ್ ಪೆರ್ಲ ಇವರಿಂದ ಭಕ್ತಿ ರಸಮಂಜರಿ ಹಾಗೂ ಪುಟಾಣಿಗಳಿಂದ ನೃತ್ಯ ವೈವಿಧ್ಯ. ಕಮ್ಮಾಜೆಯಲ್ಲಿ ಅಮ್ಮ ಗ್ರೂಪ್ಸ್‌ನ ವತಿಯಿಂದ ಸಾಂಸ್ಕೃತಿಕ ವೈವಿಧ್ಯ. ಕನ್ಯಾನದಲ್ಲಿ ಶ್ರೀಧರ ಶೆಟ್ಟಿ ಗುಬ್ಯಮೇಗಿನಗುತ್ತು ಇವರ ಪ್ರಾಯೋಜಕತ್ವದಲ್ಲಿ ಶಿವಂ ಡ್ಯಾನ್ಸ್ ಅಕಾಡೆಮಿ, ವಿಟ್ಲ ಇವರಿಂದ ಸಾಂಸ್ಕೃತಿಕ ವೈವಿಧ್ಯ ಜರಗಲಿದೆ.

ಸಮಾರಂಭಕ್ಕೆ ಊರಪರ ಊರಿನ ಎಲ್ಲಾ ಬಂಧುಗಳು ಹಸಿರುವಾಣಿಹೊರೆಕಾಣಿಕೆಗಳನ್ನು ಫೆಬ್ರವರಿ 1ರಂದು ಶನಿವಾರ ಶ್ರೀ ಸಂಸ್ಥಾನಕ್ಕೆ ಸಮರ್ಪಿಸಲಿದ್ದಾರೆ. ಬೆಳಿಗ್ಗೆ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿ ಪಂಪುವೆಲ್ಬಿ.ಸಿ.ರೋಡ್ಕಲ್ಲಡ್ಕವಿಟ್ಲ ಮಾರ್ಗವಾಗಿ ಬಂದು ಕನ್ಯಾನದಿಂದ ಮಧ್ಯಾಹ್ನ 2  ಗಂಟೆಗೆ ಹೊರಟು ಶ್ರೀ ಸಂಸ್ಥಾನಕ್ಕೆ ತಲಪಲಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ