ಮಣಿಪಾಲದ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಪೋಟೊಗ್ರಾಫಿ ಹಾಗೂ ವಿಡಿಯೋಗ್ರಾಫಿಯ ಒಂದು ತಿಂಗಳ ತರಬೇತಿ ಕಾರ್ಯಗಾರದ ಬಳಿಕ ಶಿಬಿರಾರ್ಥಿಗಳಿಗೆ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಶಿಬಿರಾರ್ಥಿ, ಬಿ.ಸಿ.ರೋಡಿನ ಛಾಯಾಚಿತ್ರಗ್ರಾಹಕ ದೀಪಕ್ ಸಾಲ್ಯಾನ್ ಅವರ ಛಾಯಾಚಿತ್ರ ಮೊದಲ ಬಹುಮಾನ ಪಡೆದಿದೆ. ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್ ಅವರು ತೀರ್ಪುಗಾರರಾಗಿ ಭಾಗವಹಿಸಿ ಬಹುಮಾನ ವಿತರಿಸಿದರು. ಈ ಸಂದರ್ಭ ಸಂಸ್ಥೆಯ ನಿರ್ದೇಶಕ ಮಂಜುನಾಥ್ ನಾಯಕ್, ಫ್ಯಾಕಲ್ಟಿ ಶ್ರೇಯಾ ಉಪಸ್ಥಿತರಿದ್ದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಿ.ಸಿ.ರೋಡಿನ ದೀಪಕ್ ಗೆ ಬಹುಮಾನ"