ಬಂಟ್ವಾಳ, ಬಿ.ಸಿ. ರೋಡು ಸುತ್ತಮುತ್ತ ಸೋಮವಾರ ಮಳೆ ಸುರಿಯುತ್ತಿದ್ದರೂ ನಾಗರಪಂಚಮಿ ಆಚರಣೆಗೆ ಅಡ್ಡಿಯಾಗಲಿಲ್ಲ. ಕೈಕಂಬ ಕಡಪಿಕರಿಯ ಕುಟುಂಬದಲ್ಲಿ ನಾಗರ ಪಂಚಮಿ ಪ್ರಧಾನ ಅರ್ಚಕ ಪುರೋಹಿತ್ ಮೊಗರ್ನಾಡು ರಾಜ ಗೋಪಾಲ ಆಚಾರ್ಯ ನೇತೃತ್ವದಲ್ಲಿ ಸಹಾಯಕ ಅರ್ಚಕರಿಂದ ವೈದಿಕ ಕಾರ್ಯಕ್ರಮ ನಡೆಯಿತು. ಶ್ರೀ ನಾಗದೇವರ ಪ್ರತಿಮೆಗೆ ಹಾಲೆರೆಯುವ ಮೂಲಕ ಪೂಜಾ ವಿಧಿ ವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಕುಟುಂಬದ ಯಜಮಾನ ಸದಾಶಿವ ಕೈಕಂಬ ಮತ್ತು
ಸದಸ್ಯರು ಶ್ರೀ ನಾಗದೇವರ ಭಕ್ತಿ ಪ್ರಸಾದವನ್ನು ಸ್ವೀಕರಿಸಿ, ಆರ್ಶೀವಾದ ಪಡೆದರು.
ಜಾಹೀರಾತು
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ರಕ್ತೇಶ್ವರಿ ದೇವಸ್ಥಾನ, ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನ, ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಸಹಿತ ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿರುವ ನಾಗಸನ್ನಿಧಿಗಳಲ್ಲಿ ಭಕ್ತರು ಹಾಲು ಸೀಯಾಳಾಭಿಷೇಕ ಮಾಡುವುದರ ಮೂಲಕ ನಾಗರಪಂಚಮಿ ಆಚರಿಸಿದರು. ಸರಕಾರಿ ಕಚೇರಿ, ಬ್ಯಾಂಕುಗಳಲ್ಲಿ ಜನಸಂದಣಿ ಕಡಿಮೆ ಇತ್ತು. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಮಳೆಯ ನಡುವೆ ಬಂಟ್ವಾಳದಲ್ಲಿ ನಾಗರಪಂಚಮಿ ಆಚರಣೆ"
Be the first to comment on "ಮಳೆಯ ನಡುವೆ ಬಂಟ್ವಾಳದಲ್ಲಿ ನಾಗರಪಂಚಮಿ ಆಚರಣೆ"