ಜಿಲ್ಲಾ ಸುದ್ದಿ

ಕಡಿರುದ್ಯಾವರ ಶಾಲೆ – ತರಕಾರಿ ಕೃಷಿಯ ಅರಿವು

ಬೆಳ್ತಂಗಡಿ ತಾಲುಕಿನ ಕಡಿರುದ್ಯಾವರ ಗ್ರಾಮದ ಸ.ಹಿ.ಪ್ರಾ ಶಾಲೆ ಕಡಿರುದ್ಯಾವರದಲ್ಲಿ ಶ್ರಮದಾನದ ಮೂಲಕ ತರಕಾರಿ ಗಿಡವನ್ನು ನೆಡಲಾಯಿತು.

ಜಾಹೀರಾತು

ಇತ್ತೀಚಿನ ದಿನಗಳಲ್ಲಿ ತರಕಾರಿ ಕೃಷಿಯ ಅರಿವು ಇಲ್ಲದೇ ಇರುವ ಮಕ್ಕಳಿಗೆ ಕೃಷಿ ಜ್ಞಾನವನ್ನು ತುಂಬಿಸುವುದರ ಜೊತೆಯಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ಬೇಕಾದ ಯೋಗ್ಯ ತರಕಾರಿಗಳು
ಅವಶ್ಯಕವಾಗಿ ಸಿಗುವುದರ ಜೊತೆಯಲ್ಲಿ ದುಬಾರಿ ಬೆಲೆಯ ತರಕಾರಿಯನ್ನು ಅಲ್ಪ ಸ್ವಲ್ಪ ತರುವ ಬದಲು ಶಾಲೆಯ ಹಿತ್ತಿಲಲ್ಲೇ ಕೃಷಿ ಚಟುವಟಿಕೆ ಮಾಡಿದಲ್ಲಿ ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಮೂಡುವಂತಾಗುತ್ತದೆ.
ಮುಂದಿನ ದಿನಗಳಲ್ಲಿ ಕೃಷಿಯ ಮಹತ್ವ ಪಾಲನೆ ಪೋಷನೆ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಕಡಿರುದ್ಯಾವರ ಶಾಲೆಯ SDMC ಅಧ್ಯಕ್ಷರಾದ ಶ್ರೀನಿವಾಸ ಗೌಡ ನೆಲ್ಲಿಪಾಲ್, ಪ್ರಗತಿ ಬಂಧು ಮಲ್ಲಡ್ಕ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ಕೋಲ್ಪೆ, ಆನಂದ ಗೌಡ ಬರಮೇಲು ಮತ್ತು ಕಡಿರುದ್ಯಾವರ ಗ್ರಾಮಸ್ಥರು, ಹಳೆವಿದ್ಯಾರ್ಥಿಗಳು, ಪ್ರಗತಿ ಬಂಧು ಮಲ್ಲಡ್ಕ ಒಕ್ಕೂಟದ ಪದಾಧಿಕಾರಿಗಳು ಸೇವಾಪ್ರತಿನಿಧಿ ಮತ್ತು ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಆನಂದ ಗೌಡ ಬರಮೇಲು ಸ್ವಾಗತಿಸಿ ಶ್ರೀನಿವಾಸ ಗೌಡ ನೆಲ್ಲಿಪಾಲ್ ಇವರು ವಂದಿಸಿದರು.

ವರದಿ:- ರಾಜೇಶ.ಎಂ.ಕಾನರ್ಪ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ