ಅರಸಿನಮಕ್ಕಿಯ ಗುರುಪ್ರಕಾಶ್‌ಗೆ ಬ್ಯಾಟರಿ ಸಂಶೋಧನೆ ಡಾಕ್ಟರೆಟ್

ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಗುರುಪ್ರಕಾಶ್ ಕರ್ಕೇರ ಅವರ ಲೀಥಿಯಮ್-ಆಕ್ಸಿಜನ್ ಬ್ಯಾಟರಿ ಕುರಿತ ಸಂಶೋಧನೆಗೆ ಅಕಾಡೆಮಿ ಆಫ್ ಸೈಂಟಿಫಿಕ್ ಆಂಡ್ ಇನ್ನೋವೇಟಿವ್ ರಿಸರ್ಚ್ (ಎಸಿಎಸ್‌ಐಆರ್) ಡಾಕ್ಟರೆಟ್ ನೀಡಿದೆ.

ಜಾಹೀರಾತು

ಪ್ರಧಾನ ಮಂತ್ರಿ ಅಧ್ಯಕ್ಷರಾಗಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್‌ಐಆರ್)ನ ಅಂಗಸಂಸ್ಥೆ ತಮಿಳುನಾಡಿನ ಕಾರೈಕುಡಿಯಲ್ಲಿರುವ ಸೆಂಟ್ರಲ್ ಇಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಇಸಿಆರ್‌ಐ)ನ ಚೆನ್ನೈ ಕ್ಯಾಂಪಸ್‌ನಲ್ಲಿ ಗುರುಪ್ರಕಾಶ್ ಕಳೆದ ಐದು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದರು. Development of efficient oxygen electrocatalysts and electrolytes for Li-O2 batteries ಎಂಬ ಥೀಸಿಸ್‌ಗೆ ಈಗ ಮಾನ್ಯತೆ ಲಭಿಸಿದೆ. ಎರಡು ಭಾರತೀಯ ಪೇಟೆಂಟ್‌ಗಳಲ್ಲಿ ಸಂಶೋಧಕರಾಗಿ ಹಾಗೂ ಆರು ಅಂತಾರಾಷ್ಟ್ರೀಯ ಸೈಂಟಿಫಿಕ್ ಜರ್ನಲ್‌ಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.

ಅರಸಿನಮಕ್ಕಿಯ ಕೆರೆಕೋಡಿ ದಿ.ದಾಸಪ್ಪ ಪೂಜಾರಿ- ದೇಜಮ್ಮ ದಂಪತಿಯ ಪುತ್ರರಾಗಿರುವ ಗುರುಪ್ರಕಾಶ್ ಈಗ ಇಲೆಕ್ಟ್ರೋಕೆಮಿಕಲ್ ಎನರ್ಜಿ ಸ್ಟೋರೇಜ್ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವ ಜರ್ಮನಿಯ ಹೆಲ್ಮ್‌ಹೋಟ್ಜ್ ಇನ್‌ಸ್ಟಿಟ್ಯೂಟ್ ಉಲ್ಮ್ (ಎಚ್‌ಐಯು) ಸಂಸ್ಥೆಗೆ ಸಂಶೋಧಕರಾಗಿ ಆಯ್ಕೆಯಾಗಿದ್ದಾರೆ.

ಏನಿದು ಬ್ಯಾಟರಿ?:

ಪ್ರಸಕ್ತ ಮೊಬೈಲ್ ಸಹಿತ ಇಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು ಹಾಗೂ ವಿದ್ಯುತ್ ಚಾಲಿತ ವಾಹನಗಳಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಬಳಕೆಯಲ್ಲಿದೆ. ಆದರೆ ಈ ಬ್ಯಾಟರಿಗಳ ಸಾಮರ್ಥ್ಯ ಕಡಿಮೆ. ಇದಕ್ಕೆ ಹೋಲಿಸಿದರೆ ಲೀಥಿಯಂ ಆಕ್ಸಿಜನ್ ಬ್ಯಾಟರಿಗಳ ಸಾಮರ್ಥ್ಯ ಹೆಚ್ಚು. ಅಂದರೆ, ಲೀಥಿಯಂ ಅಯಾನ್ ಬ್ಯಾಟರಿ ಅಳವಡಿಸಿದ ಒಂದು ವಾಹನ 150 ಕಿ.ಮೀ. ಕ್ರಮಿಸಿದ ಬಳಿಕ ಅದನ್ನು ಚಾರ್ಜ್ ಮಾಡಬೇಕಾಗುತ್ತದೆ. ಲೀಥಿಯಂ ಆಕ್ಸಿಜನ್ ಬ್ಯಾಟರಿ 500 ಕಿ.ಮೀ. ಕ್ರಮಿಸಬಹುದು. ಹಾಗಾಗಿ ಇದು ಪೆಟ್ರೋಲ್‌ಗೆ ಸಮರ್ಥ ಪರ್ಯಾಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಲೀಥಿಯಂ ಆಕ್ಸಿಜನ್ ಬ್ಯಾಟರಿ ಇನ್ನೂ ಬಳಕೆಯಲ್ಲಿಲ್ಲ. ಬ್ಯಾಟರಿ ಜೀವಿತಾವಧಿ ಸಹಿತ ಒಂದಷ್ಟು ನಕಾರಾತ್ಮಕ ಅಂಶಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಮುಂದುವರಿದಿದೆ. ಈ ನಿಟ್ಟಿನಲ್ಲಿ ಗುರುಪ್ರಕಾಶ್ ನಡೆಸಿರುವ ಸಂಶೋಧನೆ ಮಹತ್ತರವಾದದ್ದು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಅರಸಿನಮಕ್ಕಿಯ ಗುರುಪ್ರಕಾಶ್‌ಗೆ ಬ್ಯಾಟರಿ ಸಂಶೋಧನೆ ಡಾಕ್ಟರೆಟ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*