ಪೆರ್ಲ ಪುತ್ತಿಗೆ ರಸ್ತೆಯ ಬಾಡೂರು ಓಣಿಬಾಗಿಲು ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದ ದುರ್ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ, ಸುಮಾರು 35 ಅಡಿ ಆಳಕ್ಕೆ ಉರುಳಿ ಅಲ್ಲಿದ್ದ ಮನೆಯೊಂದರ ಅಂಗಳಕ್ಕೆ ಬಿತ್ತು. ಘಟನೆಯಲ್ಲಿ ತಾಯಿ ಮತ್ತು ಮಗ (ಬೀಫಾತಿಮ ಮತ್ತು ಮಹಮ್ಮದ್ ಷರೀಫ್) ಮೃತಪಟ್ಟರೆ, ಮೂವರು ಗಾಯಗೊಂಡಿದ್ದಾರೆ.
ಜಾಹೀರಾತು
ಪುತ್ತಿಗೆ ಮುಗುನಲ್ಲಿರುವ ಪತ್ನಿಯ ಸಹೋದರನ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಕುಟುಂಬ ಸಹಿತ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಓಣಿಬಾಗಿಲು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಉರುಳಿ ಬಿತ್ತು. ಅಪಘಾತದಲ್ಲಿ ಷರೀಫ್ ಪತ್ನಿ ಖೈರುನ್ನೀಸಾ , ಮಕ್ಕಳಾದ ಶ೦ನಾ ಹಾಗೂ ಶಹಾರ್ ಬಾನು ಗಂಭೀರ ಗಾಯಗೊಂಡಿದ್ದು , ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ರಸ್ತೆಯಿಂದ ಮನೆಯಂಗಳಕ್ಕೆ ಉರುಳಿದ ವ್ಯಾನು: ತಾಯಿ, ಮಗ ಮೃತ್ಯುವಶ"
Be the first to comment on "ರಸ್ತೆಯಿಂದ ಮನೆಯಂಗಳಕ್ಕೆ ಉರುಳಿದ ವ್ಯಾನು: ತಾಯಿ, ಮಗ ಮೃತ್ಯುವಶ"