ಭಿತ್ತಿಪತ್ರ ಮುದ್ರಣ ಮೇಲೆ ನಿಗಾ

ರಾಜಕೀಯ ಸಂಬಂಧಿ ಜಾಹೀರಾತು ಮತ್ತು ಭಿತ್ತಿಪತ್ರಗಳ ಮೇಲೆ ಮುದ್ರಣಕಾರರು ತಮ್ಮ ಹಾಗೂ ಜಾಹೀರಾತು ನೀಡಿದವರ ವಿವರ ಪ್ರಕಟಿಸದಿದ್ದರೆ ಸಮಸ್ಯೆ ಎದುರಿಸಬೇಕಾದೀತು!!

ಜಾಹೀರಾತು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಜಾಹೀರಾತು ನೀಡುವುದು, ಭಿತ್ತಿಪತ್ರ ಹಂಚುವುದು ಸೇರಿ ಇನ್ನಿತರ ಕಾರ್ಯಗಳ ಮೇಲೆ ನಿಗಾವಹಿಸಲಾಗುತ್ತದೆ. ರಾಜಕೀಯ ಸಂಬಂಧಿ ಜಾಹೀರಾತು ಮತ್ತು ಭಿತ್ತಿಪತ್ರ ಮುದ್ರಣಕ್ಕೆ ಸೂಚಿಸುವವರ ವಿವರ ನೀಡಬೇಕಾಗುತ್ತದೆ. ಅಲ್ಲದೆ, ಜಾಹೀರಾತು ಮತ್ತು ಭಿತ್ತಿಪತ್ರಗಳ ಮೇಲೆ ಮುದ್ರಣಕಾರರು ಮತ್ತು ಜಾಹೀರಾತು ನೀಡಿದವರ ವಿವರ ಆಯೋಗಕ್ಕೆ ಒದಗಿಸಬೇಕಾಗುತ್ತದೆ.

ಜಾಹೀರಾತು ಪ್ರಕಟಿಸುವುದಕ್ಕೂ ಮುನ್ನ ಸಂಬಂಧಪಟ್ಟ ಚುನಾವಣಾ ತಂಡಗಳಿಂದ ಅನುಮತಿ ಪಡೆಯಬೇಕು ಹಾಗೂ ಅದನ್ನು ಚುನಾವಣಾಧಿಕಾರಿಗಳು ಅನುಮೋದಿಸಬೇಕು. ಒಂದು ವೇಳೆ ಅನುಮತಿ ಪಡೆಯದಿದ್ದರೆ ಅಂತಹ ಮುದ್ರಣಕಾರರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬುದು ಆಯೋಗದ ಮಾಹಿತಿ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ