ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನಿಂದ ಗಣರಾಜ್ಯೋತ್ಸವ ನಿಮಿತ್ತ ಸಮಾಜದ ನಾಲ್ಕು ಅಶಕ್ತ ಬಡ ಕುಟುಂಬಗಳಿಗೆ 90 ಸಾವಿರ ರೂ ಧನಸಹಾಯವನ್ನು ಹಸ್ತಾಂತರಿಸಲಾಗಿದೆ.
ಮಂಗಳೂರು ಕಲ್ಲಮುಂಡ್ಕೂರಿನ ಪ್ರಕಾಶ್ ಮಿರಾಂದ ಮತ್ತು ರೆನಿಟಾ ದಂಪತಿಗೆ 20 ಸಾವಿರ ರೂ, ಪಕ್ಷಿಕೆರೆ ಕಾಪಿಕಾಡ್ ಹರೀಶ್, ಭಾರತಿ ದಂಪತಿಗೆ 25 ಸಾವಿರ ರೂ, ಕಿಲೆಂಜಾರು ಝಕಾರಿಯಾ ಅವರಿಗೆ 20 ಸಾವಿರ ರೂ ಮತ್ತು ಬಡಗಮಿಜಾರು ಅಂಬರೀಷ್ ಅವರಿಗೆ 25 ಸಾವಿರ ರೂ ಚೆಕ್ ಅನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನೀಡಲಾಯಿತು.