ವಿಟ್ಲ

ಮಂಗಿಲಪದವು ಕಬಡ್ಡಿ ಪಂದ್ಯಾಟ : ರೆಡ್ ಬಾಯ್ಸ್ ತಂಡಕ್ಕೆ ಪ್ರಶಸ್ತಿ

ಮಂಗಿಲಪದವು ನ್ಯಾಶನಲ್ ಯುವಕ ಮಂಡಲ ಹಾಗೂ ರೆಡ್ ಬಾಯ್ಸ್ ಮಂಗಿಲಪದವು  ಆಶ್ರಯದಲ್ಲಿ 60
ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟವು ಮಂಗಿಲಪದವು ಜಂಕ್ಷನ್ ನಲ್ಲಿ ನಡೆಯಿತು. ಪಂದ್ಯಾಟವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಎಸ್. ಮುಹಮ್ಮದ್ ಉದ್ಘಾಟಿಸಿದರು. ಯುವಕ ಮಂಡಲದ ಗೌರವಾದ್ಯಕ್ಷ ಮಹಾಲಿಂಗ ಭಟ್ ಅಧ್ಯಕ್ಷತೆ ವಹಿಸಿದ್ದರು.

ಜಾಹೀರಾತು

28 ತಂಡಗಳು ಭಾಗವಹಿದ್ದ ಈ ಪಂದ್ಯಾವಳಿಯಲ್ಲಿ ರೆಡ್ ಬಾಯ್ಸ್ ಮಂಗಿಲಪದವು ತಂಡವು ಪ್ರಥಮ, ಗೋಲ್ಡನ್ ಸ್ಟಾರ್ ತೌಡುಗೋಳಿ ತಂಡವು ದ್ವಿತೀಯ, ಯುವಕ ಮಂಡಲ ಮಾಣಿ ತಂಡವು ತ್ರತೀಯ ಹಾಗೂ ಸಿ.ಎಫ್.ಸಿ. ಒಕ್ಕೆತ್ತೂರು ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಮಂಗಿಲಪದವು ರೆಡ್ ಬಾಯ್ಸ್ ತಂಡದ ರೋಷನ್ ಉತ್ತಮ ದಾಳಿಗಾರ, ಅಜಯ್ ಉತ್ತಮ ಹಿಡಿತಗಾರ, ಹಾಗೂ ತೌಡುಗೋಳಿ ಗೋಲ್ಡನ್ ಸ್ಟಾರ್ ತಂಡದ ನಝೀರ್ ಆಲ್ ರೌಂಡರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ವೀರಕಂಭ ಗ್ರಾ.ಪಂ. ಸದಸ್ಯ ಉಬೈದ್ ಕೆ, ವಿಟ್ಲ ಪಟ್ಟಣ ಪಂಚಾಯತು ಸದಸ್ಯರಾದ ಹಸೈನಾರ್ ನೆಲ್ಲಿಗುಡ್ಢೆ, ಅಬೂಬಕ್ಕರ್ ವಿ.ಎಂ, ವಿ.ಎಚ್.ಶಮೀರ್ ಪಳಿಕೆ, ಎಸ್.ಡಿ.ಪಿ.ಐ.ಮುಖಂಡ ಶಾಕಿರ್ ಅಳಕೆಮಜಲ್, ಪುತ್ತೂರು ಯುವ ಕಾಂಗ್ರೆಸ್‌ ಕಾರ್ಯದರ್ಶಿ ದಾವೂದ್ ಒಕ್ಕೆತ್ತೂರು, ಕಬಡ್ಡಿ ಮಾಜಿ ಆಟಗಾರ ಅಬ್ದುಲ್ ಲತೀಫ್ ಪಾತ್ರತೋಟ, ರಫೀಕ್ ಮಾಸ್ಟರ್,ಉದ್ಯಮಿಗಳಾದ ಸರವಣ ಪುತ್ತೂರು, ಸುಲೈಮಾನ್ ಒಕ್ಕೆತ್ತೂರು, ಇಕ್ಬಾಲ್ ಕೊಡಂಗೆ, ರಝಾಕ್ ಮಂಗಿಲಪದವು, ಸಂದೀಪ್, ಪ್ರದೀಪ್,ಇಸಾಕ್ ಮಂಗಿಲಪದವು, ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧರು.

ಸಂಘಟಕರಾದ ಸಿದ್ದೀಕ್, ಇರ್ಶಾದ್, ಶಪೀಕ್, ಹನೀಫ್, ನವಾಝ್ ಮೊದಲಾದವರು ಉಪಸ್ಥಿತರಿದ್ದರು. ಶಾಲಿ ಸ್ವಾಗತಿಸಿ,ವಂದಿಸಿದರು. ಅರಾಫತ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ