ಫರಂಗಿಪೇಟೆ

ತಾಲೂಕು ಸಾಹಿತ್ಯ ಸಮ್ಮೇಳನ: ಕವನ, ಬರೆಹಗಳಿಗೆ ಆಹ್ವಾನ

ಫರಂಗಿಪೇಟೆ ಸೇವಾಂಜಲಿಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪ್ರಸ್ತುತಿ ಎಂಬ ಗೋಷ್ಠಿ ಏರ್ಪಡಿಸಲಾಗಿದೆ.

ಜಾಹೀರಾತು

ಇದರಲ್ಲಿ ಭಾಗವಹಿಸಲು ಇಚ್ಛಿಸುವ ಬಂಟ್ವಾಳ ತಾಲೂಕಿನ ಹಿರಿ-ಕಿರಿಯ ಆಸಕ್ತ ಕವಿ-ಸಾಹಿತಿಗಳು ತಮ್ಮ ಸ್ವರಚಿತ ಕಥೆ, ಕವನ, ಚುಟುಕು/ಹನಿಕವನ ಇತ್ಯಾದಿ ಸಾಹಿತ್ಯ ಪ್ರಕಾರ ಗಳನ್ನು ಕಳುಹಿಸಿ ಕೊಡಲು ಕೋರಲಾಗಿದೆ.

ತಾವು ಕಳುಹಿಸುವ ಗದ್ಯ ಬರೆಹ ಎರಡು ಪುಟಗಳ ಮಿತಿಯಲ್ಲಿರಲಿ. ಕವನ/ಭಾವಗೀತೆಗಳಾದರೆ ಒಂದು ಪುಟದ ಒಳಗಿರಬೇಕು. ನಾಲ್ಕರಿಂದ ಆರು ಸಾಲುಗಳ ಚುಟುಕು ಅಥವಾ ಹನಿಕವನಗಳನ್ನು ಕಳುಹಿಸಿ ಕೊಡಬಹುದು. ಆಯ್ಕೆ ಯಾದ ರಚನೆಗಳನ್ನು ಸಾಹಿತ್ಯ ಪ್ರಸ್ತುತಿ ಗೋಷ್ಠಿ ಯಲ್ಲಿ ವಾಚಿಸಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಪ್ರಕಾರದ ರಚನೆ ಗಳನ್ನು ಬಿಳಿ ಹಾಳೆಯ ಒಂದೇ ಬದಿಯಲ್ಲಿ ಸ್ಫುಟವಾಗಿ ಬರೆದು ತಮ್ಮ ದೂರವಾಣಿ ಸಂಖ್ಯೆ ಹಾಗು ವಿಳಾಸದೊಂದಿಗೆ ಅಕ್ಟೋಬರ್ 28 ರೊಳಗೆ ಕಳುಹಿಸಿ ಕೊಡಬೇಕು… ವಿಳಾಸ: ಅಧ್ಯಕ್ಷ ರು/ಕಾರ್ಯ ದರ್ಶಿ,ಸ್ವಾಗತ ಸಮಿತಿ, ಬಂಟ್ವಾಳ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನ, ತುಂಬೆ ಪದವಿ ಪೂರ್ವ ಕಾಲೇಜು, ತುಂಬೆ-574143 ,ಬಂಟ್ವಾಳ ದ.ಕ .ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9483903306 ಸಂಪರ್ಕಿಸಬಹುದು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ