ಬಂಟ್ವಾಳ

ಧನಾತ್ಮಕ ಚಿಂತನೆ, ಬರವಣಿಗೆ ಅಗತ್ಯ

ಪರೀಕ್ಷೆಗಳಲ್ಲಿ ಪ್ರಶ್ನೆಗಳಿಗೆ ಉರಿಸುವ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯ ಅಧ್ಯಯನವನ್ನು ಮಾಡುವಾಗ ಧನಾತ್ಮಕವಾದ ಚಿಂತನೆ- ಓದುಗಳ ಬಳಿಕ ಧನಾತ್ಮಕ ಬರವಣಿಗೆಯನ್ನು ಮಾಡಬೇಕು.ಇದರಿಂದ ಪ್ರಶ್ನೆಗಳ ಕುರಿತಾಗಿರುವ ಹೆದರಿಕೆ ಹೋಗಿ ಎದುರಿಸುವ ಆತ್ಮ ವಿಶ್ವಾಸ ಮೂಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲ, ಮಾನವ ಸಂಪನ್ಮೂಲ ತರಬೇತುದಾರ ಯು ಎಸ್ ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಾಹೀರಾತು

ಸ.ಪ್ರ.ದ.ಕಾಲೇಜು ಬಿ.ಸಿ.ರೋಡ್ ಇಲ್ಲಿನ ಇನ್ನೋವೇಟಿವ್ ಕ್ಲಬ್, ಪರೀಕ್ಷಾ ಸಮಿತಿಗಳ ಆಶ್ರಯದಲ್ಲಿ ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆಯ ಅರ್ಧಮಂಡಲ ವರ್ಷಾಚರಣೆಯ ಅಂಗವಾಗಿ ಇಲ್ಲಿನ ಬಿ.ಎ.ವಿದ್ಯರ್ಥಿಗಳಿಗೆ ಆಯೋಜಿಸಿದ್ದ “ಅಧ್ಯಯನ ಕುಶಲತೆ ತರಬೇತಿ”ಯಲ್ಲಿ ತರಬೇತಿ ನೀಡಿ ಈ ಮಾತುಗಳನ್ನು ಹೇಳಿದರು.

ಆಂಗ್ಲ ಉಪನ್ಯಾಸಕ ಪ್ರೊ.ನಂದಕಿಶೋರ್ ಹಾಗೂ ಪರೀಕ್ಷಾ ಸಮಿತಿಯ ಸಂಯೋಜಕಿ ಶ್ರೀಮತಿ ವೈಶಾಲಿ ಸಂಯೋಜಿಸಿದ್ದ ಈ ತರಬೇತಿಯು ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಇವರ ಮಾರ್ಗದರ್ಶನದಲ್ಲಿ ನಡೆಯಿತು.ಪ್ರೊ.ನಂದಕಿಶೋರ್ ಸ್ವಾಗತಿಸಿ ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ