ಯುವ ರೈತರಿಂದ ಛಾಯಾ ಸರಕಾರ: ರೈತಸಂಘದ ಸಭೆಯಲ್ಲಿ ಸಲಹೆ

ಜಾಹೀರಾತು

ಜಿಲ್ಲೆಯಲ್ಲಿ ಯುವಕರ ರೈತ ಮಂತ್ರಿಮಂಡಳ ರಚಿಸಿ ಛಾಯಾ ಸರಕಾರ ಸ್ಥಾಪಿಸಬೇಕು, ಆಡಳಿತವನ್ನು ರೈತಪರವಾಗಿಸಲು ಹೆಜ್ಜೆಯಿಡಬೇಕು ಎಂದು ರೈತ ಮುಖಂಡ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದ್ದಾರೆ.

ಭಾನುವಾರ ಬಿ.ಸಿ.ರೋಡಿನಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ,ಹಸಿರು ಸೇನೆ ದ.ಕ ಜಿಲ್ಲೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅದಕ್ಕಾಗಿ 18 ರಿಂದ 30 ವರ್ಷದ ಆಸಕ್ತ ಯುವಕರಿಂದ ಅರ್ಜಿಗೆ ಅಹ್ವಾನಿಸಲಾಗಿದೆ ಎಂದು ಹೇಳಿದರು. ಅರ್ಜಿ ಹಾಕುವವರು ದಯಾನಂದ ಶೆಟ್ಟಿ, ಕುಳವೂರುಗುತ್ತು ಹೌಸ್, ಕುಳವೂರು ಗ್ರಾಮ, ಕುಪ್ಪೆಪದವು ಪೋಸ್ಟ್ ಮಂಗಳೂರು ತಾಲೂಕು ಇಲ್ಲಿಗೆ ಸಲ್ಲಿಸಬಹುದು ಎಂದು ಶಾಸ್ತ್ರಿ ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ರೈತ ಮುಖಂಡರಾದ ಧನಕೀರ್ತಿ ಬಲಿಪ,ಶ್ರೀಧರ ಶೆಟ್ಟಿ ಬೈಲುಗುತ್ತು,ಮನೋಹರ ಶೆಟ್ಟಿ ನಡಿಕಂಬಳಗುತ್ತು, ಮುರುವ ಮಹಾಬಲ ಭಟ್, ಸುಬ್ರಮಣ್ಯ ಭಟ್ ಸಜಿಪ, ಈಶ್ವರ ಭಟ್, ಎನ್.ಕೆ ಇದಿನಬ್ಬ,ಸುದೀಶ್ ಮಯ್ಯ, ರೊನಾಲ್ಡ್ ಡಿಸೋಜ, ಸುದೀಶ್ ಭಂಡಾರಿ ವಿಟ್ಲ, ದಯಾನಂದ ಶೆಟ್ಟಿ ಕುಳಾವೂರು ಗುತ್ತು ಹಾಗು ಇತರ ಮುಖಂಡರು ನಾನಾ ಸಲಹೆ ಸೂಚನೆಗಳನ್ನು ಒದಗಿಸಿದರು.

ರೈತರ ಸಾಲ ಮನ್ನ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಹಾಗೂ ಸಂಘಟನೆ  ಬಗ್ಗೆ ಚರ್ಚಿಸಿ ರೈತರಿಂದ ಬಂದ ಸಲಹೆ ದಾಖಲೀಕರಣ ಮಾಡಲಾಯಿತು.ತುಂಬೆ ಡ್ಯಾಂ ಸಮಸ್ಯೆ, ಕುಮ್ಕಿ ಹಕ್ಕು ಬಗ್ಗೆ ಚರ್ಚಿಸಿ ಮುಂದಿನ ಸಭೆ ಬೆಳ್ತಂಗಡಿಯಲ್ಲಿ ನಡೆಸಲು ನಿರ್ಣಯಿಸಲಾಯಿತು.

ಮೂಲರಪಟ್ಣ ತಂಕಿಹಿತ್ಲು ಸುಂದರ ಶೆಟ್ಟಿ ಅವರ ಅಡಕೆ ಮತ್ತು ತೆಂಗು ಮರಗಳನ್ನು ಮಾರ್ಗ ರಚಿಸುವ ನೆಪದಲ್ಲಿ ನಾಶ ಮಾಡಲಾಗಿದ್ದು ಈ ಕುರಿತು ಸೂಕ್ತ ಪರಿಹಾರಕ್ಕಾಗಿ ಹೋರಾಟ ನಡೆಸಲು ಹಸಿರು ಸೇನೆ ಸಂಚಾಲಕ ದಯಾನಂದ ಶೆಟ್ಟಿ ಸೂಚನೆ ನೀಡಿದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಯುವ ರೈತರಿಂದ ಛಾಯಾ ಸರಕಾರ: ರೈತಸಂಘದ ಸಭೆಯಲ್ಲಿ ಸಲಹೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*