ಕಲ್ಲಡ್ಕ

ಮಾಣಿ ಪೆರಾಜೆ ಮಠ: ಮಾ.6ರಿಂದ 8 ವಾರ್ಷಿಕೋತ್ಸವ, ಸೂತ್ರ ಸಂಗಮ


ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠ ಮತ್ತು ಮಂಗಳೂರು ಹೋಬಳಿ ಹಾಗೂ ಶ್ರೀರಾಮ ಸಂಸ್ಕೃತ ವೇದ ಪಾಠ ಶಾಲೆ ವಾರ್ಷಿಕೋತ್ಸವ, ಸೂತ್ರ ಸಂಗಮ, ಶ್ರೀಗುರುಭಿಕ್ಷಾ ಸೇವೆಯು ಮಾ.6ರಿಂದ 8ರ ವರೆಗೆ ನಡೆಯಲಿದೆ.

ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಮಾ.6ರಂದು ಸಂಜೆ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠಕ್ಕೆ ಚಿತ್ತೈಸಲಿದ್ದಾರೆ. ಮಾ.7ರಂದು ಬೆಳಗ್ಗೆ 10 ಗಂಟೆಗೆ ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀಗುರುಭಿಕ್ಷಾ ಸೇವೆ, ಪಾದುಕಾ ಪೂಜೆ, ಸಂಜೆ ಸೂರ್ಯಾಸ್ತಕ್ಕೆ ಶ್ರೀಕರಾರ್ಚಿತ ದೇವತಾ ಪೂಜೆ ನೆರವೇರಲಿದೆ.
ಮಾ.೮ರಂದು ಬೆಳಗ್ಗೆ ಗಂಟೆ 6ರಿಂದ ನವಗ್ರಹಶಾಂತಿ ಹವನ, ರಾಮತಾರಕ ಹವನ, ಆಂಜನೇಯ ಹವನ, ಕಲ್ಪೋಕ್ತ ಪೂಜೆ, 7.27ರ ಮೀನ ಲಗ್ನ ಸುಮುಹೂರ್ತದಲ್ಲಿ ಸೂತ್ರ ಸಂಗಮ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀಕರಾರ್ಚಿತ ದೇವತಾ ಪೂಜೆ, ಮಂಗಳೂರು ಹೋಬಳಿಯ ಶ್ರೀಗುರುಭಿಕ್ಷಾ ಸೇವೆ, ಪಾದುಕಾ ಪೂಜೆ, 12 ಗಂಟೆಗೆ ವಾರ್ಷಿಕೋತ್ಸವದ ಸಭೆ, ದೇಣಿಗೆ ಸಮರ್ಪಣೆ, ಶ್ರೀಗಳಿಂದ ಆಶೀರ್ವಚನ, ಸೂರ್ಯಾಸ್ತಕ್ಕೆ ಶ್ರೀಕರಾರ್ಚಿತ ದೇವತಾ ಪೂಜೆ ನೆರವೇರಲಿದೆ. ಮಾ.9ರಂದು ಶ್ರೀಗಳು ನಿರ್ಗಮಿಸುತ್ತಾರೆ. ಈ ಹಿಂದೆ ಮಾ.7ರಿಂದ ಮಾ.10ರ ವರೆಗೆ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಬದಲಾವಣೆಯಾಗಿದ್ದು ಮಾ.6ರಿಂದ ಮಾ 8ರ ತನಕ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ