ಕಲ್ಲಡ್ಕ

ಸಾಲೆತ್ತೂರಿನಿಂದ ಕಲ್ಲಡ್ಕಕ್ಕೆ ಸಾಗಿದ ಜಾಥಾ

ಬಿಜೆಪಿ ನಾಯಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಾರಥ್ಯದಲ್ಲಿ ಬಂಟ್ವಾಳ ಪರಿವರ್ತನೆಗೆ ನಮ್ಮ ನಡಿಗೆ ಬಿಜೆಪಿಯ ಜಾಥಾ 9ನೇ ದಿನಕ್ಕೆ ಸೋಮವಾರ ಕಾಲಿರಿಸಿತು.

ಜಾಹೀರಾತು

ಭಾನುವಾರ ಸಂಜೆ ಕರೋಪಾಡಿಯಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ಸಾಲೆತ್ತೂರಿನ ಸೋಮನಾಥ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ರಾಜೇಶ್ ನಾಯ್ಕ್, ಬೆಳಗ್ಗೆ 8 ಗಂಟೆಗೆ ಕಾರ್ಯಕರ್ತರೊಡನೆ ಮಂಚಿ ಗ್ರಾಮಕ್ಕೆ ಪಾದಯಾತ್ರೆ ನಡೆಸಿದರು.

ಮಂಚಿಯ ಬಳಿಕ ಸುರಿಬೈಲು ಕಡೆಗೆ ಹೆಜ್ಜೆ ಹಾಕಿದಾಗ ಎಸ್.ಜಿಉಸ್ಮಾನ್, ಅಬ್ದುಲ್‌ಖಾದರ್  ಹಾಗೂ ನೂರಾರು ಕಾರ್ಯಕರ್ತರು ರಾಜೇಶ್ ನಾಯ್ಕ್ ಅವರಿಗೆ ಹೂಹಾರ, ಶಾಲು ಹಾಕಿ ಸ್ವಾಗತಿಸಿದರು.

ಜಾಹೀರಾತು

ಬಳಿಕ ಪಾದಯಾತ್ರೆ ಮುಂದೆ ಸಾಗಿ ಬೊಳಂತೂರು ಗ್ರಾಮವನ್ನು ಪ್ರವೇಶಿಸಿತು. ಬೊಳಂತೂರು ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರಾದ ಜಯರಾಮ ರೈ ಹಾಗೂ ಎ.ಪಿ.ಎಂ.ಸಿ ಸದಸ್ಯರಾದ ನೇಮಿರಾಜ ರೈ ನೇತೃತೃತ್ವದಲ್ಲಿ ಪಾದಯಾತ್ರೆಯನ್ನು ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಪಾದಯಾತ್ರೆಅಮ್ಟೂರು ಮೂಲಕ ಗೋಳ್ತಮಜಲು ಗ್ರಾಮದಕಲ್ಲಡ್ಕಕ್ಕೆ ತೆರಳಿತು.

ಈ ಸಂದರ್ಭ ಕ್ಷೇತ್ರ ಅಧ್ಯಕ್ಷರಾದ ಬಿ. ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ, ಕಮಾಲಕ್ಷಿ ಪೂಜಾರಿ, ತಾ.ಪಂ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್‌ ರೈ ಮಾಣಿ, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷರಾದ ದಿನೇಶ್‌ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿ ಸೋಜಾ, ಮಾಜಿ ಜಿ.ಪಂ ಸದಸ್ಯರಾದ ಚೆನ್ನಪ್ಪಕೋಟ್ಯಾನ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ನಾರಾಯಣ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ಅಭಿಷೇಕ್‌ ರೈ, ರೈತ ಮೋರ್ಚಾ ಅಧ್ಯಕ್ಷರಾದ ತನಿಯಪ್ಪ ಗೌಡ, ಜಿಲ್ಲಾ ರೈತ ಮೋರ್ಚಾದ ನಂದರಾಮ ರೈ, ಯುವ ಮೋರ್ಚಾದ ತಾಲೂಕು ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಸಂತೋಷ್‌ ರಾಯಿ, ಲೋಹಿತ್ ಕೊಳ್ನಾಡು, ಸಂಪತ್ ಕೋಟ್ಯಾನ್, ಸಾಲೆತ್ತೂರು, ಮಂಚಿ ಪಂಚಾಯತ್ ಅಧ್ಯಕ್ಷರುಗಳಾದ ಚಂದ್ರಾವತಿ, ಪ್ರಮಿಳಾ, ಉಪಾಧ್ಯಕ್ಷರಾದ ಮೋಹನ್‌ದಾಸ್ ಶೆಟ್ಟಿ,ಕೊಳ್ನಾಡು, ಮಂಚಿ, ಸಾಲೆತ್ತೂರು, ಪಂಚಾಯತ್ ಸಮಿತಿ ಅಧ್ಯಕ್ಷರುಗಳಾದ ವಿದ್ಯೇಶ್‌ ರೈ, ವಿಶ್ವನಾಥ ಪೂಜಾರಿ ಕಟ್ಟತ್ತಿಲ, ರಮೇಶ್‌ ರಾವ್ ಮಂಚಿ, ಪಂಚಾಯತ್ ಸದಸ್ಯರಾದ ಸುಮಾ,ಉದಯ ಶಂಕರ್, ರಾಜೇಶ ನೂಜಿಪಾಡಿ, ಪ್ರಮೋದ್‌ಕುಮಾರ್, ಪುಷ್ಪ ಕಾಮತ್, ನಾರಾಯಣ್‌ ಟೈಲರ್‌ ಪಕ್ಷದ ಪ್ರಮುಖರುಗಳಾದ ವೇಣುಗೋಪಾಲ್ ಮಂಕುಡೆ, ಪ್ರಶಾಂತ್ ಶೆಟ್ಟಿ ಅಗರಿ, ಸದಾಶಿವ ಶೆಟ್ಟಿ ಕಾಡುಮಠ, ಶಶಿಧರ ರೈ ಕುಳಾಲು, ರಾಜರಾಮ ಹೆಗ್ಡೆ, ಹರೀಶ್‌ ಟೈಲರ್, ಗೋಪಾಲ ಕೃಷ್ಣ ಭಟ್, ಶಂಕರ್ ಶೆಟ್ಟಿಗಾರ್,ರಾಮನಾಯ್ಕ, ಜಯರಾಮ ಶೆಟ್ಟಿ, ಪ್ರಮೋದ್‌ಕುಮಾರ್ ,ಭಾಸ್ಕರ್‌ ಕೈಯ, ವಿಶ್ವನಾಥಕೈಯ, ಉಮೇಶ್‌ ಕೊಕ್ಕಪುಣಿ ಬೈಲು, ಪುಷ್ಪರಾಜಚೌಟ,ರಾಮಚಂದ್ರ ಸುವರ್ಣ, ನವೀನ್ ,ಶುಭ,ರೇವತಿ ಮತ್ತು ಬೃಹತ್ ಸಂಖ್ಯೆಯಲ್ಲಿಕಾರ್‍ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ