ವಿಟ್ಲ

ವಿಟ್ಲದ ಉಕ್ಕುಡ ಮುಹ್ಯಿಸ್ಸುನ್ನ ದರ್ಸ್ ಚಾಂಪಿಯನ್ ಶಿಫ್

www.bantwalnews.com

ಜಾಹೀರಾತು

ಮುಹ್ಯಿಸ್ಸುನ್ನ ಅಸೋಶಿಯೇಶನ್ ಆಫ್ ಕರ್ನಾಟಕ ವತಿಯಿಂದ ಇತ್ತೀಚೆಗೆ ಮಜ್ಲೀಸ್ ಕ್ಯಾಂಪಸ್ ಗಾಣಿಮಾರಿನಲ್ಲಿ ನಡೆದ  ಮುತಅಲ್ಲಿಂ ಪ್ರತಿಭಾ ಸಮ್ಮೀಲನ ಮುಹ್ಯಿಸ್ಸುನ್ನ ಮುಸಾಬಕ2017 ಸ್ಪರ್ಧೆಯಲ್ಲಿ ವಿಟ್ಲದ ಉಕ್ಕುಡ ಮುಹ್ಯಿಸ್ಸುನ್ನ ದರ್ಸ್ ಚಾಂಪಿಯನ್ ಶಿಫ್ ತನ್ನದಾಗಿಸಿಕೊಂಡಿದೆ.

ಸ್ಪರ್ಧೆಯಲ್ಲಿ ಸುಮಾರು 11 ದರ್ಸ್ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜ್ಯೂನಿಯರ್ ವಿಭಾಗದ ಕಲಾ ಪ್ರತಿಭೆಯಾಗಿ ಉಕ್ಕುಡ ದರ್ಸ್ ದಾವೂದ್ ಪೆರುವಾಯಿ ಆಯ್ಕೆಯಾಗಿದ್ದಾರೆ. ಹಾಫಿಲ್ ಆಹ್ಮದ್ ಶರೀಫ್ ಕಾಮಿಲ್ ಸಖಾಫಿ ಮಳಲಿ ನೇತೃತ್ವದಲ್ಲಿ ನಡೆಯುತ್ತಿರುವ ಇದೇ ತಂಡ ಕಳೆದ ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಜಾಹೀರಾತು

ಬಹುಮಾನ ವಿತರಣಾ ಸಮಾರಂಭದಲ್ಲಿ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಶೈಖುನಾ ಬೇಕಲ್ ಉಸ್ತಾದ್, ಮುಹ್ಯಿಸ್ಸುನ್ನ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶೈಖುನಾ ಹಸನ್ ಬಾಖವಿ ಪಲ್ಲಾರ್ ಮೊದಲಾದವರು ಭಾಗವಹಿಸಿದ್ದರು.

ಮುಹ್ಯಿಸ್ಸುನ್ನ ಅಧ್ಯಕ್ಷ ಅಶ್ರಫ್ ಸಖಾಫಿ ಕಿನ್ಯ, ಮುಸಾಬಕ ಸಮಿತಿ ಚೇಯರ್ಮೆನ್ ಸಿರಾಜುದ್ದೀನ್ ಸಖಾಫಿ ಕನ್ಯಾನ, ಮುಹ್ಯಿಸ್ಸುನ್ನ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪಾತೂರು, ಎಸ್ಎಸ್ಎಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ, ಕಾವಳಕಟ್ಟೆ ಮಜ್ಲೀಸ್ ಚೇಯರ್ಮೆನ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಕಾಮಿಲ್, ಬದ್ರುದ್ದೀನ್ ಅಝ್ಝರಿ ಕೈಕಂಬ ಮೊದಲಾದವರು ಪ್ರಶಸ್ತಿ ವಿತರಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ