ಜನರಿಂದ ತುಂಬಿಕೊಂಡಿದ್ದ ರಿಕ್ಷಾವೊಂದನ್ನು ರಸ್ತೆ ಬದಿ ನಿಲ್ಲಿಸಿದ್ದ ಸಂದರ್ಭ ಇದ್ದಕ್ಕಿದ್ದಂತೆ ಚಲಿಸಿ ಪ್ರಪಾತಕ್ಕೆ ಉರುಳಿದ ಘಟನೆ ಮಂಗಳವಾರ ಪಡಿಬಾಗಿಲು ಜಂಕ್ಷನ್ ನಲ್ಲಿ ಮಂಗಳವಾರ ನಡೆದಿದೆ.
ಮುಳಿಯ ಮೂಲದ ವಿಶ್ವನಾಥ ಎಂಬವರು ಚಲಾಯಿಸುತ್ತಿದ್ದ ರಿಕ್ಷಾದಲ್ಲಿ ಸುಮಾರು 6 ಮಂದಿ ಪ್ರಯಾಣಿಕರಿದ್ದರು. ಪಡಿಬಾಗಿಲು ಜಂಕ್ಷನ್ ನಲ್ಲಿ ಮಹಿಳೆಯೊಬ್ಬರು ಅಂಗಡಿಯಿಂದ ಸಾಮಾನು ಖರೀದಿಗೆಂದು ನಿಲ್ಲಿಸಿಲು ಹೇಳಿದ್ದರು. ಚಾಲಕನೂ ರಿಕ್ಷಾದಿಂದ ಇಳಿದ ಸಮಯದಲ್ಲಿ ಇದ್ದಕ್ಕಿಂದಂತೆ ಚಲಾಯಿಸಿದ ರಿಕ್ಷಾ ರಸ್ತೆ ಬದಿಯ ತಡೆಗೋಡೆಯಿಂದ ಸುಮಾರು 20 ಅಡಿ ಆಳದ ಕಂಡಕಕ್ಕೆ ಉರುಳಿತು.
ನಿಕ್ಕಿತಪುಣಿ ಪ್ರಣಮ್ಯ, ಎರುಂಬು ಈಶ್ವರ ಮೂಲ್ಯ, ಎರುಂಬು ರತ್ನ ಮತ್ತು ಇನ್ನೊಬ್ಬರು ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿದ್ದಾರೆ.
ಜಾಹೀರಾತು
ಪ್ರಪಾತದಲ್ಲಿ ಚರಂಡಿ ಒಳಗೆ ಸಿಲುಕಿದ್ದ ಜನರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲೆತ್ತಿದ್ದಾರೆ. ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವರು ಪ್ರಥಮ ಚಿಕಿತ್ಸೆ ಪಡೆದು ಮಂಗಳೂರು ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಪ್ರಪಾತಕ್ಕೆ ಉರುಳಿದ ರಿಕ್ಷಾ ನಾಲ್ವರಿಗೆ ಗಾಯ"
Be the first to comment on "ಪ್ರಪಾತಕ್ಕೆ ಉರುಳಿದ ರಿಕ್ಷಾ ನಾಲ್ವರಿಗೆ ಗಾಯ"