ಜೇಸುದಾಸ್ ಸಹಿತ 62 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ, ಜೋಗಿ ಸಹಿತ ದ.ಕ, ಉಡುಪಿಯ ಐವರಿಗೆ ಗೌರವ

www.bantwalnews.com

 ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್ ಸೇರಿದಂತೆ 62 ಸಾಧಕರಿಗೆ 2017 ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ನವೆಂಬರ್ 1ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಜಾಹೀರಾತು

ನೃತ್ಯಗುರು ಉಳ್ಳಾಲ ಮೋಹನ ಕುಮಾರ್, ಯಕ್ಷಗಾನ ಕಲಾವಿದ ಶಿವರಾಮ ಜೋಗಿ , ಕ್ರೀಡಾಪಟು ಸಹನಾ ಕುಮಾರಿ , ಲೇಖಕಿ ಡಾ.ವೈದೇಹಿ, ಸಮಾಜ ಸೇವಕ ಡಾ.ರವೀಂದ್ರನಾಥ ಶಾನುಭಾಗ್  – ಇವರು ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು.

ಹಿರಿಯ ಕಲಾವಿದರಾದ ಬಿ.ಸಿ.ರೋಡಿನ  ಶಿವರಾಮ ಜೋಗಿ  63 ವರ್ಷಗಳ ತಿರುಗಾಟವನ್ನು ನಾನಾ ಮೇಳಗಳಲ್ಲಿ ಮಾಡಿದ್ದಾರೆ. 76 ವರ್ಷದ ಜೋಗಿ ಈಗ ಹನುಮಗಿರಿ ಮೇಳದಲ್ಲಿದ್ದಾರೆ. ಪೌರಾಣಿಕ, ಸಾಮಾಜಿಕ, ತುಳು ಪ್ರಸಂಗಗಳ ಬಹುತೇಕ ಎಲ್ಲ ಪಾತ್ರಗಳನ್ನು ಮಾಡಿರುವ ಜೋಗಿ, ಹಿರಣ್ಯಾಕ್ಷ, ಹಿರಣ್ಯಕಶಿಪು, ಕಂಸ, ರಾವಣ ಮುಂತಾದ ಪಾತ್ರಗಳನ್ನು ನಿರ್ವಹಿಸುವುದರಲ್ಲಿ ಸಿದ್ಧಹಸ್ತರು.

ಜಾಹೀರಾತು

 

ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.

ಕ್ಷೇತ್ರ ಹೆಸರು ಜಿಲ್ಲೆ
ನ್ಯಾಯಾಂಗ ಹೆಚ್.ಎನ್.ನಾಗಮೋಹನ ದಾಸ್ ಕೋಲಾರ
ಸಾಹಿತ್ಯ ಡಾ.ಬಸವರಾಜ ಸಬರದ ಕಲಬುರಗಿ
ಡಾ.ವೈದೇಹಿ ಉಡುಪಿ
ಮಾಹೆರ್ ಮನ್ಸೂರ್ ತುಮಕೂರು
ಡಿ.ಎಸ್.ನಾಗಭೂಷಣ ಶಿವಮೊಗ್ಗ
ಸಿನಿಮಾಕಿರುತೆರೆ ಡಾ.ಕೆ.ಜೆ.ಯೇಸುದಾಸ್ (ಹಿನ್ನಲೆ ಗಾಯನ) ಚೆನ್ನೈ
ಕಾಂಚನ (ನಟನೆ) ಬೆಂಗಳೂರು
ಮುಖ್ಯಮಂತ್ರಿ ಚಂದ್ರು (ಸಿನಿಮಾಕಿರುತೆರೆ) ಬೆಂಗಳೂರು
ಹಾಸನ ರಘು (ಸಾಹಸ ಸಂಯೋಜನೆ) ರಾಮನಗರ
ಸಂಗೀತನೃತ್ಯ ವಿದೂಷಿ ಲಲಿತ.ಜೆ.ರಾವ್ (ಹಿಂದೂಸ್ತಾನಿ ಸಂಗೀತ) ಬೆಂಗಳೂರು
ಪಂ.ರಾಜಪ್ರಭು ಧೋತ್ರೆ (ಅಭಂಗ ಗಾಯನ) ಬೆಳಗಾವಿ
ರಾಜೇಂದ್ರ ಸಿಂಗ್ ಪವಾರ್ (ಹಾರ್ಮೋನಿಯಂ) ಬೀದರ್
ವೀರೇಶ ಕಿತ್ತೂರ (ಸುಗಮ ಸಂಗೀತ) ಗದಗ
ಉಳ್ಳಾಲ ಮೋಹನ ಕುಮಾರ್(ನೃತ್ಯ) ದಕ್ಷಿಣ ಕನ್ನಡ
ಜಾನಪದ ತಂಬೂರಿ ಜವರಯ್ಯ (ತತ್ವಪದ) ಮಂಡ್ಯ
ಶಾವಮ್ಮ (ಲಂಬಾಣಿ ನೃತ್ಯ ) ಕೊಪ್ಪಳ
ಗೊರವರ ಮೈಲಾರಪ್ಪ (ಗೊರವರ ಕುಣಿತ) ಚಿತ್ರದುರ್ಗ
ತಾಯಮ್ಮ (ಸೋಬಾನೆ ಪದ) ಚಿಕ್ಕಮಗಳೂರು
ಮಾನಪ್ಪ ಈರಪ್ಪ ಲೋಹಾರ (ಪುರವಂತಿಕೆ) ಬಾಗಲಕೋಟೆ
ಕೃಷ್ಣಪ್ಪ ಗೋವಿಂದಪ್ಪ ಪುರಂದರ ( ಡೊಳ್ಳಿನ ಪದ) ಹಾವೇರಿ
ಡೆಂಗೆಮ್ಮ ಕರಡಿಗುಡ್ಡ (ಜಾನಪದ ಗಾಯನ) ರಾಯಚೂರು
ಯಕ್ಷಗಾನಬಯಲಾಟ ಶಿವರಾಮ ಜೋಗಿ (ತೆಂಕುತಿಟ್ಟು) ದಕ್ಷಿಣ ಕನ್ನಡ
ಬಳ್ಕೂರು ಕೃಷ್ಣಯಾಜಿ (ಬಡಗುತಿಟ್ಟು) ಉತ್ತರ ಕನ್ನಡ
ಕೆ.ಪಂಪಾವತಿ (ಬಯಲಾಟ) ಬಳ್ಳಾರಿ
ಈಶ್ವರವ್ವ ಹುಚ್ಚವ್ವ ಮಾದರ (ಬಯಲಾಟ) ವಿಜಯಪುರ
ಸಮಾಜ ಸೇವೆ ಮೀರಾ ನಾಯಕ್ ಮೈಸೂರು
ಡಾ.ರವೀಂದ್ರನಾಥ ಶಾನುಭಾಗ್ ಉಡುಪಿ
ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಗಲಿ ಬಾಗಲಕೋಟೆ
ವಿಜ್ಞಾನತಂತ್ರಜ್ಞಾನ ಡಾ.ಎಂ.ಆರ್.ಶ್ರೀನಿವಾಸನ್ (ಅಣುಶಕ್ತಿ ಸಂಶೋಧನೆ) ಬೆಂಗಳೂರು
ಡಾ.ಮುನಿವೆಂಕಟಪ್ಪ ನಂಜಪ್ಪ (ಸಸ್ಯಶಾಸ್ತ್ರ ಸಂಶೋಧನೆ) ಕೋಲಾರ
ವೈದ್ಯಕೀಯ ಡಾ.ಲೀಲಾವತಿ ದೇವದಾಸ್ ಬೆಂಗಳೂರು
ಕ್ರೀಡೆ ಶೇಖರ್ ನಾಯಕ್ (ಅಂಧರ ಕ್ರಿಕೆಟ್ ) ಶಿವಮೊಗ್ಗ
ವಿ.ಆರ್.ರಘುನಾಥ್ (ಹಾಕಿ) ಕೊಡಗು
ಸಹನಾ ಕುಮಾರಿ (ಎತ್ತರ ಜಿಗಿತ) ದಕ್ಷಿಣ ಕನ್ನಡ
ಶಿಕ್ಷಣ ಡಾ.ಪಿ.ಶ್ಯಾಮರಾಜು ಬೆಂಗಳೂರು
ಇಂಜಿನಿಯರಿಂಗ್ ಬಿ..ರೆಡ್ಡಿ ಬೆಳಗಾವಿ
ಹೊರನಾಡು ರೋನಾಲ್ಡ್ ಕೊಲಾಸೋ ದುಬೈ
ಸಂಘ ಸಂಸ್ಥೆ ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ ಬೆಳಗಾವಿ
ಸಂಕೀರ್ಣ ರಾಮಚಂದ್ರ ಗುಹಾ (ಇತಿಹಾಸಕಾರ-ಚಿಂತಕ) ಬೆಂಗಳೂರು
ಎಸ್.ಸಯ್ಯದ್ ಅಹಮದ್ (ಪರ್ಷಿಯನ್ ಭಾಷಾ ತಜ್ಞ) ಬೆಂಗಳೂರು
ಎಚ್.ಬಿ.ಮಂಜುನಾಥ್ (ವ್ಯಂಗ್ಯಚಿತ್ರ) ದಾವಣಗೆರೆ
ಡಾ.ಪಿ.ಕೆ.ರಾಜಶೇಖರ್ (ಜಾನಪದ ತಜ್ಞ) ಮೈಸೂರು
ಪ್ರೊ.ಬಿ.ಗಂಗಾಧರಮೂರ್ತಿ (ಕಲೆ-ಶಿಕ್ಷಣ) ಚಿಕ್ಕಬಳ್ಳಾಪುರ
ಚಿತ್ರಕಲೆ-ಶಿಲ್ಪಕಲೆ ಜಿ.ಎಲ್.ಎನ್. ಸಿಂಹ (ಚಿತ್ರಕಲೆ) ಮೈಸೂರು
ಶಾಣಮ್ಮ ಮ್ಯಾಗೇರಿ(ಕೌದಿ ಕಲೆ) ಯಾದಗಿರಿ
ಹೊನ್ನಪ್ಪಾಚಾರ್ಯ ( ಶಿಲ್ಪ ಕಲೆ) ಬೆಂಗಳೂರು
ಮನೋಹರ ಕೆ.ಪತ್ತಾರ (ಚಿತ್ರ-ಶಿಲ್ಪ) ವಿಜಯಪುರ
ಕೃಷಿ-ಪರಿಸರ ಡಾ.ಬಿಸಲಯ್ಯ ಚಾಮರಾಜನಗರ
ಅಬ್ದುಲ್ ಖಾದರ ಇಮಾಮ ಸಾಬ ಧಾರವಾಡ
ಎಸ್.ಎಂ.ಕೃಷ್ಣಪ್ಪ ಬೆಂಗಳೂರು ಗ್ರಾಮಾಂತರ
ಸಿ.ಯತಿರಾಜು ತುಮಕೂರು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಜೇಸುದಾಸ್ ಸಹಿತ 62 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ, ಜೋಗಿ ಸಹಿತ ದ.ಕ, ಉಡುಪಿಯ ಐವರಿಗೆ ಗೌರವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*