ಜಿಲ್ಲಾ ಸುದ್ದಿ

ಮಂಜುನಾಥನ ಸನ್ನಿಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ

ಈಗಿನ ಸುದ್ದಿ

www.bantwalnews.com

ಜಾಹೀರಾತು

ಪ್ರಧಾನಮಂತ್ರಿ ನರೇಂದ್ರ ಮೋದಿ ದ.ಕ.ಜಿಲ್ಲೆಯ ಧರ್ಮಸ್ಥಳಕ್ಕೆ ಬಾನುವಾರ ಬೆಳಗ್ಗೆ 10.55ಕ್ಕೆ ಬಂದಿಳಿದಿದ್ದಾರೆ.

ಮಂಗಳೂರು ಬಜ್ಪೆ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಆಗಮಿಸಿದ ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಬಿಜೆಪಿ ಮುಖಂಡರಾದ ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ, ಯೋಗೀಶ್ ಭಟ್, ರಾಜ್ಯ ಸರಕಾರದ ಪರವಾಗಿ ಆಹಾರ ಸಚಿವ ಯು.ಟಿ.ಖಾದರ್, ಮಂಗಳೂರಿನ ಪ್ರಥಮ ಪ್ರಜೆ ಕವಿತಾ ಸನಿಲ್ ಮುಂತಾದವರು ಸ್ವಾಗತಿಸಿದರು.

ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಅವರು ಅ. 29ರಂದು ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಉಜಿರೆಯಲ್ಲಿ ನಡೆಯಲಿರುವ ಶ್ರೀ ಧ.ಗ್ರಾ. ಯೋಜನೆ ಸ್ವ- ಸಹಾಯ ಸಂಘಗಳ ಪಾಲುದಾರರ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ ಗಣ್ಯರ ದಂಡೇ ಸ್ವಾಗತಿಸಿತು.

ಜಯಘೋಷದ ನಡುವೆ ನಮೋ

ಜುಬ್ಬಾ, ಪೈಜಾಮವನ್ನು ಧರಿಸಿದ್ದ ಮೋದಿ ಅವರನ್ನು ಕಾರಿನಲ್ಲಿ ಹೆಲಿಪ್ಯಾಡ್ ನಿಂದ ಮಂಜುನಾಥನ ಸನ್ನಿಧಿಗೆ ಕರೆತರಲಾಯಿತು. ಕಾರಿನಿಂದಿಳಿದ ಸಂದರ್ಭ ಸಾರ್ವಜನಿಕರ ಜಯಘೋಷವನ್ನು ಕೇಳಿಸಿಕೊಂಡ ಪ್ರಧಾನಿ, ಎಲ್ಲರಿಗೂ ಕೈಬೀಸಿದರು. ಅದಾದ ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮೋದಿಯವರನ್ನು ಸ್ವಾಗತಿಸಿದರು. ಬಳಿಕ ಮಂಜುನಾಥನ ದರ್ಶನಕ್ಕೆ ಪ್ರಧಾನಿ ತೆರಳಿದರು.

ಜಾಹೀರಾತು

ಒಟ್ಟು ನಾಲ್ಕು ಹೆಲಿಕಾಪ್ಟರ್ ಗಳು ಬಂದಿದ್ದವು. ಅವುಗಳಲ್ಲಿ ಒಂದರಲ್ಲಿ ಮೋದಿ ಬಂದಿಳಿದಿದ್ದರೆ, ಉಳಿದವುಗಳು ಭದ್ರತೆಗೆ ಸಂಬಂಧಿಸಿದ್ದಾಗಿವೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts