ಸುರಿಯುವ ಮಳೆಗೇ ಆಧಾರ್‌ಗೆ ಸಾಲು

ಬಿ.ಸಿ.ರೋಡ್‌ನ ಮಿನಿ ವಿಧಾನಸೌಧದ ಎದುರು ಇರುವ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಟೋಕನ್ ಗಾಗಿ ಮಂಗಳವಾರ ಬೆಳಗ್ಗೆ ಸುಮಾರು 8ರಿಂದಲೇ ಜನರು ಸಾಲುಗಟ್ಟಿ ನಿಲ್ಲುವ ದೃಶ್ಯ ಕಂಡುಬಂತು.

ಜಾಹೀರಾತು

ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ರಜಾದಿನಗಳಿದ್ದ ಕಾರಣ, ಈ ಜನಜಂಗುಳಿ ಇತ್ತು. ಇದೇ ಹೊತ್ತಿನಲ್ಲಿ ಮಳೆಯೂ ಸುರಿದು ಕೆಸರಿನಲ್ಲೇ ನಿಂತಿರುವ ಜನರಿಗೆ ಮತ್ತಷ್ಟು ತಲೆನೋವು ತಂದಿತು.

ಅಧಾರ್ ಕಾರ್ಡಗಾಗಿ ಛಾಯಾಚಿತ್ರ ತೆಗೆಯಲು, ಇದಕ್ಕಾಗಿ ಟೋಕನ್ ಪಡೆಯಲು ಮತ್ತು ಪಹಣಿ ಪತ್ರ ಮತ್ತಿತರ ದಾಖಲೆ ಪತ್ರಗಳನ್ನು ಪಡೆಯಲು , ಅರ್ಜಿ ಸಲ್ಲಿಕೆಗಾಗಿ ಜನರು ಮೈಲುದ್ದಕ್ಕೆ ಸಾಲುಗಟ್ಟಿ ನಿಲ್ಲಬೇಕಾಯಿತು. ವೃದ್ಧರು, ನಿಶ್ಯಕ್ತರಿಗೆ ಕ್ಯೂ ಇಲ್ಲ ಎಂಬ ನಿಯಮವೂ ಇಲ್ಲಿಗೆ ಲಾಗೂ ಆಗದ ಕಾರಣ ಎಲ್ಲರೂ ಕೊಡೆ ಹಿಡಿದು ನಿಲ್ಲುವ ದೃಶ್ಯ ಕಂಡುಬಂತು.

ಬೆಳಗ್ಗೆ ಸುಮಾರು ೧೧.೩೦ರವರೆಗೂ ಇದ್ದ ಸಾಲು ಬಳಿಕ ನಿಧಾನವಾಗಿ ಕರಗತೊಡಗಿತು. ತಾಲೂಕಿನ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿಗೆ ಸಂಬಂಧಿಸಿ ಎರಡು ಪ್ರತ್ಯೇಕ ನೆಮ್ಮದಿ ಕೇಂದ್ರಗಳಿದ್ದರೂ ಈ ಪೈಕಿ ಪಾಣೆಮಂಗಳೂರು ಕೇಂದ್ರದಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಆಧಾರ್ ನ ಪ್ರಕ್ರಿಯೆ ನಡೆಸಲೂ ತೊಡಕಾಯಿತು.

ಜಾಹೀರಾತು

ಆಧಾರ್ ಪ್ರಕ್ರಿಯೆಗೆ ಎರಡೂ ಕೇಂದ್ರದಲ್ಲಿ ಒಂದೊಂದೇ ಕಂಪ್ಯೂಟರ್ ಇರುವುದರಿಂದ ಜನರು ಕೆಲವೊಮ್ಮೆ ಸಂಜೆಯವರೆಗೂ ಸಾಲು ನಿಂತಿರುತ್ತಾರೆ. ಅದಕ್ಕಾಗಿ ಕೇಂದ್ರದ ಸಿಬ್ಬಂದಿ ಆಧಾರ್ ಮಾಡಿಸಲೆಂದು ಬರುವ ಜನರಿಗೆ ವಿವಿಧ ದಿನಾಂಕ ನಮೂದಿಸಿ ಟೋಕನ್ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ದಿನದಂದು ಕೊಟ್ಟಿರುವ ನಿಗದಿತ ಸಂಖ್ಯೆಗಷ್ಟೆ ಆಧಾರ್ ಪ್ರಕ್ರಿಯೇ ನಡೆಸಲಾಗುತ್ತಿದೆ. ಇಲ್ಲಿನ ಆಧಾರ್ ಕೇಂದ್ರಕ್ಕೆ ಹೆಚ್ಚುವರಿ ಕಂಪ್ಯೂಟರ್,ಸಿಬ್ಬಂದಿಗಳ ನೇಮಕಕ್ಕೆ ಹಲವು ಸಮಯದಿಂದ ಸಾರ್ವಜನಿಕರಿಂದ ಕೂಗು ಕೇಳುತ್ತಿದ್ದರೂ ಅದು ಈಡೇರಿಲ್ಲ. ಗ್ರಾಮಮಟ್ಟದಲ್ಲಿ ಈ ಪ್ರಕ್ರಿಯೆ ನಡೆಸಬೇಕು ಎಂಬ ಅಳಲು ಸಾರ್ವಜನಿಕರದ್ದು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸುರಿಯುವ ಮಳೆಗೇ ಆಧಾರ್‌ಗೆ ಸಾಲು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*