ವಿಟ್ಲ

ಬಿ.ಸಿ.ರೋಡಿನ ಕುಲಾಲ ಸಮುದಾಯ ಭವನದಲ್ಲಿ ಸೆಪ್ಟೆಂಬರ್ ನಲ್ಲಿ ಶ್ರೀಧಾಮ ಸೇವಾ ಪ್ರಕಲ್ಪ ಉದ್ಘಾಟನೆ

ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿಯ ವತಿಯಿಂದ ಸೆಪ್ಟೆಂಬರ್ 19ರಂದು ಬಿ.ಸಿ.ರೋಡಿನ ಕುಲಾಲ ಸಮುದಾಯ ಭವನದಲ್ಲಿ ಶ್ರೀ ಗುರು ಪಾದುಕಾ ಪೂಜೆ ಹಾಗೂ ಶ್ರೀಧಾಮ ಸೇವಾ ಪಕಲ್ಪದ ಉದ್ಘಾಟನಾ ಸಮಾರಂಭ ನಡೆಯಲಿದ್ದು  ಅದರ  ಆಮಂತ್ರಣ ಪತ್ರ ಬಿಡುಗಡೆ ಭಾನುವಾರ ಮಾಣಿಲ ಕ್ಷೇತ್ರದಲ್ಲಿ ನಡೆಯಿತು.

ಜಾಹೀರಾತು

ಶ್ರೀ ಮೋಹನಾದಾಸ ಪರಮಹಂಸ ಸ್ವಾಮೀಜಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬಳಿ ಸೇವಾ ಸಮಿತಿ ಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾರ್ಯಕ್ರಮದ ಕುರಿತಾಗಿ ಮಾರ್ಗದರ್ಶನ ಮಾಡಿದರು. ಮಾಣಿಲ ಶ್ರೀಧಾಮದ  ವೇದಮೂರ್ತಿ ನಯನಕೃಷ್ಣ ಭಟ್ ಅಯವರ ನೇತೃತ್ವದಲ್ಲಿ ಶ್ರೀ ಗುರು ಪಾದಕಾ ಪೂಜೆ ನಡೆಯಲಿದ್ದು ಸೇವೆ, ಸಂಸ್ಕಾರ, ಸಂಸ್ಕೃತಿಯಿಯಿಂದ ನಿಸರ್ಗದತ್ತ ಎನ್ನುವ ಧ್ಯೇಯವಾಕ್ಯದಡಿ ಸೇವಾಕಾರ್ಯಗಳನ್ನು ನಡೆಸುವ ಸಲುವಾಗಿ ಶ್ರೀಧಾಮ ಸೇವಾ ಪ್ರಕಲ್ಪವು ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭ ಸೇವಾ ಸಮಿತಿಯ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ಕಾರ್ಯದರ್ಶಿ ಕೇಶವ ಬಂಗೇರ, ಸಲಹೆಗಾರ ದಾಮೋದರ ಬಿ.ಎಂ. ಉಪಾಧ್ಯಕ್ಷರಾದ ಪುರುಷ ಸಾಲ್ಯಾನ್ ಶಂಭೂರು, ಪುಷ್ಪರಾಜ ಶೆಟ್ಟಿ, ಕೃಷ್ಣ ಶ್ಯಾಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜ್‌ಕುಮಾರ್, ಕಾರ್ಯದರ್ಶಿ ಸತೀಶ್‌ಶೆಟ್ಟಿ ಹಾಜರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ