ಕಲ್ಲಡ್ಕ

ಸಂಸ್ಕೃತ ಸಂಘದ ವತಿಯಿಂದ ಗುರುವಂದನೆ

ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರದ್ಯೋತ ಸಂಸ್ಕೃತ ಸಂಘವನ್ನು ಹಿರಿಯ ಶಿಕ್ಷಕ ಜಯಂತ ನಾಯಕ್ ಕುಂಡೇರಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನಮ್ಮ ಹಿರಿಯರು ನಮ್ಮ ಆಸ್ತಿ. ಅವರಲ್ಲಿನ ಅಪಾರ ಅನುಭವವೇ ಒಂದು ಜೀವನ ಪಾಠ. ಇಂದಿನ ಎಲ್ಲಾ ಪಠ್ಯಕ್ರಮವನ್ನು ಮೀರಿದ ಜ್ಞಾನ ಅವರ ಅನುಭವದಲ್ಲಿ ಬಂದಿದೆ. ಆದ್ದರಿಂದ ಒಡನಾಟವೇ ಒಂದು ಜೀವನ ಶಿಕ್ಷಣ ಎಂದು ಅವರು ಅಭಿಪ್ರಾಯಪಟ್ಟರು.
ಗೌರವ ಸ್ವೀಕರಿಸಿದ ಇನ್ನೋರ್ವ ಹಿರಿಯ, ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ನಂದೋಡಿ ಸಂಸ್ಥೆಗೆ ಶುಭ ಹಾರೈಸಿದರು. ಹರಿಕಥೆಯನ್ನು ಶಿರಸಿಯ ಈಶ್ವರದಾಸ ಕೊಪ್ಪೆಸರ ನಡೆಸಿಕೊಟ್ಟರು. ಈ ಸಂದರ್ಭ ಹಾರ್ಮೋನಿಯಂನಲ್ಲಿ ರಮೇಶ್ ಹೆಬ್ಬಾರ್, ತಬಲಾದಲ್ಲಿ ಪೃಥ್ವಿರಾಜ್, ತೃತೀಯ ಬಿ.ಕಾಂ ಸಹಕರಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ಮಹಾಲಕ್ಷ್ಮಿ ಸ್ವಾಗತಿಸಿ, ಸದಸ್ಯರಾದ ಪೂಜಾ ಹಾಗೂ ಶಶಿಪ್ರಭಾ ಸಮ್ಮಾನಿತರನ್ನು ಪರಿಚಯಿಸಿ, ಅಧ್ಯಕ್ಷೆ ವಿದ್ಯಾಆರ್ ನಿರೂಪಿಸಿ, ಚಂದ್ರಿಕಾ ವಂದಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ