ತೊಕ್ಕೊಟ್ಟು ರೈಲ್ವೆ ಹಳಿ ಸಮೀಪದಲ್ಲಿರುವ ಮಸ್ಜಿದುಲ್ ಹುದಾ ಮಸೀದಿಗೆ ಶುಕ್ರವಾರ ರಾತ್ರಿ ಕಲ್ಲೆಸೆದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 10.45ರ ವೇಳೆಗೆ ಮಸೀದಿಗೆ ಕಲ್ಲು ಬಿದ್ದುದನ್ನು ಗಮನಿಸಿ ಖತೀಬರು ಗಾಬರಿಯಿಂದ ಹೊರಬಂದ ಸಂದರ್ಭ ಅಂಗಡಿ ಮುಚ್ಚಿ ಬರುತ್ತಿದ್ದ ವ್ಯಾಪಾರಿಗಳು ವಿಚಾರಿಸಿದರು. ಕೂಡಲೇ ಮಸೀದಿಯತ್ತ ಧಾವಿಸಿದಾಗ ಅಲ್ಲಿ ಕಲ್ಲೆಸೆಯುತ್ತಿದ್ದನೆನ್ನಲಾದ ಚೆಂಬುಗುಡ್ಡೆ ಭಟ್ನಗರ ನಿವಾಸಿ ಸಾಗರ್ (22) ಎಂಬಾತನನ್ನು ಕಂಡು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎಸಿಪಿ ಶೃತಿ ನೇತೃತ್ವದಲ್ಲಿ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಸೀದಿಗೆ ಕಲ್ಲು, ಆರೋಪಿಯ ಹಿಡಿದೊಪ್ಪಿಸಿದ ಸ್ಥಳೀಯರು"