ಸಜೀಪನಡು ಗ್ರಾಮದಲ್ಲೊಂದು ವಿನೂತನ ರುದ್ರಭೂಮಿ ನಿರ್ಮಾಣ

ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ಸಾರ್ವಜನಿಕ ರುದ್ರಭೂಮಿಯೀಗ ಪವಿತ್ರ ತಾಣವಾಗಿ ಮಾರ್ಪಾಡಾಗುತ್ತಿದೆ.
ಸುಮಾರು ೦.೮೫ ಎಕ್ರೆ ಸ್ಥಳದಲ್ಲಿ ನಿರ್ಮಿಸಲಾದ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ಮೂರ್ತಿಗಳ ರಚನಾ ಕಾರ್ಯ ನಡೆಯುತ್ತಿದೆ.


ರುದ್ರಭೂಮಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಮಾರ್ಗದರ್ಶನ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವದಾಸ ಅಡಪ ಇರಾ ಅವರ ನೇತೃತ್ವದಲ್ಲಿ ಕಾರ್ಯ ಸಾಗಿದೆ.
ಸಜೀಪನಡು ಮಾತ್ರವಲ್ಲದೆ ಅಕ್ಕಪಕ್ಕದ ಸಜೀಪಪಡು, ಸಜೀಪಮೂಡ, ಸಜೀಪಮುನ್ನೂರು, ಚೇಳೂರು, ಇರಾ, ಮಂಚಿ ಗ್ರಾಮಗಳಲ್ಲಿನ ಶವ ಸಂಸ್ಕಾರಕ್ಕೆ ಇಲ್ಲಿ ಅವಕಾಶವಿದೆ. ಈ ಗ್ರಾಮಗಳ ಗ್ರಾಮಸ್ಥರು ರುದ್ರಭೂಮಿಯ ಅಭಿವೃದ್ಧಿ ಸಮಿತಿಯಲ್ಲಿದ್ದಾರೆ.
೩೦ ಲಕ್ಷ ರೂ. ವೆಚ್ಚ


ರುದ್ರಭೂಮಿಯನ್ನು ಸುಮಾರು ೩೦ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗಾಗಲೇ ಸುಮಾರು ೪೦ ಅಡಿ ಎತ್ತರದ ಶಿವನ ವಿಗ್ರಹ, ಸತ್ಯ ಹರಿಶ್ಚಂದ್ರನ ಪ್ರತಿಮೆ ನಿರ್ಮಾಣಗೊಂಡಿದೆ. ೩೦ ಅಡಿ ಎತ್ತರದ ತ್ರಿಶೂಲಸ್ತಂಭ, ಡಮರು ರಚನೆ ಕಾರ್ಯ ಪ್ರಗತಿಯಲ್ಲಿದೆ.
ಶ್ರೀ ಕ್ಷೇತ್ರ ಧಮ೯ಸ್ಥಳ ವತಿಯಿಂದ ಒದಗಿಸಲಾದ ದಹನ ಚೇಂಬರ್ ಈಗ ಲಭ್ಯ. ಇನ್ನೊಂದು ದಹನ ಚೇಂಬರ್ ,ಪ್ರವೇಶದ್ವಾರ, ಶವಸಂಸ್ಕಾರದ ಮುನ್ನ ಅಂತಿಮ ದಶ೯ನಕ್ಕಾಗಿ ಮೃತದೇಹವನ್ನಿರಿಸಲು ಶವ ಹಾಗೂ ಸತ್ಯಹರೀಶ್ಚಂದ್ರ ಪ್ರತಿಮೆ ಯ ಸಮ್ಮುಖದಲ್ಲಿ ಕಟ್ಟೆಯೊಂದನ್ನು ನಿಮಿ೯ಸಲಾಗುವುದು ಎಂದು ಅಧ್ಯಕ್ಷ ಯಶವಂತ ಡಿ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ರುದ್ರಭೂಮಿಯ ಸುತ್ತಲೂ ವಿವಿಧ ಜಾತಿಯ ಸಸಿಗಳು, ತೆಂಗಿನ ಗಡವನ್ನು ನೆಟ್ಟು ಪಾಲನೆ ಮಾಡಲಾಗುತ್ತಿದೆ. ರುದ್ರಭೂಮಿಯ ಭದ್ರತೆಯ ದೃಷ್ಠಿಯಿಂದ ಅವರಣ ಗೋಡೆ, ತಡೆಗೋಡೆಯನ್ನು ನಿಮಿ೯ಸಲಾಗುವುದಲ್ಲದೆ, ಸುತ್ತಲೂ ಇಂಟರ್ ಲಾಕ್ ಅಳವಡಿಸಲಾಗುವುದು. ವಿಶೇಷವಾಗಿ ಈ ರುದ್ರಭೂಮಿಗೆ ಶವ ಸಾಗಿಸುವುದಕ್ಕಾಗಿ ಅಂಬುಲೆನ್ಸ್ ಸೇವೆಯನ್ನು ಉಚಿತವಾಗಿ ನೇತಾಜಿ ಯುವಕ ಸಂಘದಿಂದ ಕಲ್ಪಿಸಲಾಗಿದೆ.

ಜಾಹೀರಾತು

 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸಜೀಪನಡು ಗ್ರಾಮದಲ್ಲೊಂದು ವಿನೂತನ ರುದ್ರಭೂಮಿ ನಿರ್ಮಾಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*