ಓಂಕಾರ ಸಂಕೇತಾಕ್ಷರಕ್ಕೂ ತುಳುವಿಗೂ ನಂಟು

www.bantwalnews.com

ಅಂಕಣ: ನಮ್ಮ ಭಾಷೆ

ತುಳು ಭಾಷೆಯ ಪ್ರಾಚೀನತೆಗೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಹಿಂದುಗಳು ಮನೆಯ ಬಾಗಿಲಿನಲ್ಲಿ ಮತ್ತು ಬೇರೆ ಬೇರೆ ದೇವರ ರಂಗೋಲಿಗಳನ್ನು ಬರೆಯುವ ಓಂ ಸಂಕೇತವು ತುಳುವಿನಿಂದ ಬಂದುದೆಂದರೆ ಅಚ್ಚರಿ ಆಗದೇ ಇರದು.

ಜಾಹೀರಾತು

ದೇವಭಾಷೆ ಸಂಸ್ಕೃತದ ಈ ಸಂಕೇತ ತುಳುವಿನ ಅಕ್ಷರದಿಂದ ಬಂದುದೆಂದು ಅನೇಕ ವಿದ್ವಾಂಸರು ದೃಢಪಡಿಸಿದ್ದಾರೆ. ಒ ಮತ್ತು ಮ್ ತುಳು ಅಕ್ಷರದಿಂದ ಈ ಸಂಕೇತ ಬಂದಿದೆ. ಇತ್ತೀಚೆಗೆ ಜರ್ಮನಿಯವರು ಜಗತ್ತಿನ ಹತ್ತು ಹಿರಿಯ ಭಾಷೆಯ ಬಗ್ಗೆ ಸಂಶೋಧನೆ ನಡೆಸಿದಾಗ, ತುಳು ಮೂಲದ ತಮಿಳಿನ ನಂತರದ ಸ್ಥಾನ ಗಳಿಸಿದ ಸಂಸ್ಕೃತದ ಓಂ ಚಿಹ್ನೆ ತುಳುವಿನಿಂದ ಬಂದಿದೆ ಎಂದರೆ ಆ ಸಂಶೋಧನೆಗೆ ಬಲ ಬಂದಿದೆ ಎನ್ನಲೇಬೇಕು. ಹೀಗೆ ತುಳು ಭಾಷೆಯೂ ತನ್ನ ಹಿರಿಮೆಯನ್ನು ತೋರ್ಪಡಿಸಿದೆ.

ಅನೇಕ ಕಾರಣಗಳಿಂದ ಅದು ಹಿಂದೆ ಸರಿದಿರುವುದು ಸತ್ಯ. ಮತ್ತೆ ಅದರ ಘನತೆ ಗೌರವವನ್ನು ತುಳುವರು ಎತ್ತಿ ಹಿಡಿಯಬೇಕಾದರೆ, ತುಳುವನ್ನು ಭಾಷೆಯಾಗಿ ಬರವಣಿಗೆಯಲ್ಲಿ ಉಪಯೋಗಿಸುವ ಅಗತ್ಯ ಇದೆ.

ಜಾಹೀರಾತು

ವಿಶ್ವಕೋಶವಾಗಿ ಬೆಳೆದ ವಿಕಿಪೀಡಿಯಾದಲ್ಲಿನ 1200 ಲೇಖನ 2016ರ ಆಗಸ್ಟ್ 5ರಂದು ಸ್ವತಂತ್ರ ವಿಶ್ವಕೋಶವಾಗಿ ತುಳು ರೂಪುಗೊಂಡಿದೆ. ಈಗ ವಿಕಿಪೀಡಿಯಾಕ್ಕೆ ಲೇಖನ ಅಪ್ ಲೋಡ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದುದರಿಂದ 1200ಕ್ಕೂ ಮಿಕ್ಕಿ ವಿಕಿಪೀಡಿಯಾದಲ್ಲೇ ಅಪ್ಲೋಡ್ ಆಗಿದೆ. ಸುಮಾರು 2007ರಲ್ಲಿ ಯು.ಬಿ.ಪವನಜ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದ್ದು ಅದು ಈಗ ವೇಗ ಪಡೆದುಕೊಳ್ಳುತ್ತಿದೆ. 2014ರ ಡಿಸೆಂಬರಿನಲ್ಲಿ ಅಡ್ಯಾರಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬದಲ್ಲಿ ವಿಕಿಪಿಡಿಯಾದ ಸ್ಟಾಲ್ ಒಂದಿದ್ದು, ಅನೇಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಸಂದರ್ಶಕರಿಗೆ ವಿಕಿಪೀಡಿಯಾದಲ್ಲಿ ಲೇಖನ ಅಪ್ ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅಲ್ಲದೆ ಉಡುಪಿ ಮತ್ತು ಮಂಗಳೂರಿನಲ್ಲಿ ಈ ಬಗ್ಗೆ ಕಾರ್ಯಾಗಾರವನ್ನು ನಡೆಸಿ, ವಿಕಿಪೀಡಿಯಾ ಬಗ್ಗೆ ಜನರಿಗೆ ತಿಳುವಳಿಕೆ ನೀಡಿದ್ದಾರೆ. ವಿಕಿಪೀಡಿಯಾದಲ್ಲಿ ತುಳು ಸಂಸ್ಕೃತಿ ಭಾಷೆ, ಆಹಾರ , ಅಡುಗೆಗೆ ಸಂಬಂಧಿಸಿ ಲೇಖನಗಳು, ಭೂತಾರಾಧನೆ, ಯಕ್ಷಗಾನವೇ ಇತ್ಯಾದಿ ಲೇಖನಗಳನ್ನು ಅಪ್ ಲೋಡ್ ಮಾಡಬೇಕು. ಪ್ರಸ್ತುತ ವಿಕಿಪೀಡಿಯಾದಲ್ಲಿ ಮಾಹಿತಿ, ಫೊಟೋ ಲಿಂಕ್, ಇತ್ಯಾದಿಗಳುಳ್ಳ 2000 ಬೈಟ್ಸ್ ಇರುವ ಲೇಖನ ಸಂಗ್ರಹವಿದೆ. ಸುಮಾರು 700 ರಷ್ಟು ಲೇಖನಗಳಿವೆ. ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಲು ಇವೆಲ್ಲದರ ಅವಶ್ಯಕತೆ ಇದೆ.

ನಿಮ್ಮ ಅಭಿಪ್ರಾಯಗಳನ್ನು ಲೇಖಕರೊಂದಿಗೆ ಹಂಚಿಕೊಳ್ಳಿ: ಬಿ.ತಮ್ಮಯ್ಯ, 9886819771 ಇದು ಅವರ ವಾಟ್ಸಾಪ್ ನಂಬ್ರವೂ ಹೌದು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

B Thammayya
ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Be the first to comment on "ಓಂಕಾರ ಸಂಕೇತಾಕ್ಷರಕ್ಕೂ ತುಳುವಿಗೂ ನಂಟು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*