ನೇತ್ರಾವತಿ ಒಡಲಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಆರೋಪ ಕೇಳಿಬರುತ್ತಿರುವುದು ಇಂದುನಿನ್ನೆಯ ವಿಷಯವಲ್ಲ. ಆಗಾಗ್ಗೆ ಇಲ್ಲಿಗೆ ದಾಳಿ ನಡೆಸುವುದು ಹಾಗೂ ಮತ್ತೆ ಅಂಥದ್ದೇ ಕೆಲಸ ಮುಂದುವರಿಯುತ್ತಿರುವುದು ಈಗ ಸಾಮಾನ್ಯ ವಿಷಯವಾಗಿ ಪರಿವರ್ತಿತವಾಗಿದೆ.
ಆದರೆ ಕೆಲ ಗ್ರಾಮಗಳಲ್ಲಿ ಸ್ಥಳೀಯರೇ ಮರಳು ದಂಧೆ ಅಕ್ರಮ ವಹಿವಾಟಿನ ವಿರುದ್ಧ ತಿರುಗಿಬಿದ್ದಿದ್ದಾರೆ. ಇದರಿಂದ ಅವರು ಪ್ರಾಣಭೀತಿಗೆ ಒಳಗಾಗಿದ್ದೂ ಇದೆ. ಆದರೂ ಅಕ್ರಮ ಮರಳುದಂಧೆಕೋರರ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಊರವರು, ಆಗಾಗ್ಗೆ ಈ ಬಗ್ಗೆ ಎಚ್ಚರ ನೀಡುತ್ತಲೇ ಇರುತ್ತಾರೆ.
ಜಾಹೀರಾತು
ಇಂಥದ್ದೇ ಒಂದು ಘಟನೆ ಮಂಗಳವಾರ ನಡೆಯಿತು. ಬಿಳಿಯೂರು ಕೊಳೆಂಚಿಯಡ್ಕ ಎಂಬಲ್ಲಿ ನೇತ್ರಾವತಿ ತಟದಲ್ಲಿ ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಲು ಉಪಯೋಗಿಸಲಾಗಿದೆ ಎನ್ನಲಾದ ಮಿನಿ ಲಾರಿಯನ್ನು ನಾಗರಿಕರು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ವಾರದ ಹಿಂದೆ ನಾಗರೀಕರೇ ಒಂದು ಲಾರಿಯನ್ನು ಹಿಡಿದು ಪುತ್ತೂರು ಸಹಾಯಕ ಅಧೀಕ್ಷಕ ರಿಷ್ಯಂತ್ ಅವರಿಗೆ ಮಾಹಿತಿ ನೀಡಿ ಇಲಾಖೆಗೆ ಒಪ್ಪಿಸಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಮರಳು ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿ ವಶಕ್ಕೆ"
Be the first to comment on "ಮರಳು ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿ ವಶಕ್ಕೆ"