ಬಂಟ್ವಾಳ

ಯೋಗ ಶಿಕ್ಷಕರ ಕಾರ್ಯಾಗಾರ

ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ವಿವೇಕಾನಂದ ಸಂಸ್ಥೆ ಬೆಂಗಳೂರು, ಆಯುಷ್ ಇಲಾಖೆ ದೆಹಲಿ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮಧುಮೇಹ ನಿಯಂತ್ರಣ ಮತ್ತು ಮಧುಮೇಹ ಮುಕ್ತ ಭಾರತ ಯೋಗ ಶಿಕ್ಷಕರ ಕಾರ್ಯಾಗಾರವನ್ನು ವೈದ್ಯ ಡಾ.ನಿರಂಜನ ಆಚಾರ್ಯ ಉದ್ಘಾಟಿಸಿದರು.

ಕಾಯಿಲೆಗಳು ಹೇಳದೆ ಕೇಳದೆ ಬರುತ್ತದೆ. ರೋಗಿಗಳು ಬೇರೆ ರೋಗಗಳ ಪತ್ತೆಗೆ ಹೋದಾಗ ಮಧುಮೇಹ ಇರುವುದು ಅರಿವಿಗೆ ಬರುತ್ತದೆ.ಇಂದಿನ ಸಮಾಜದಲ್ಲಿ ಮಧುಮೇಹಿಗಳ ಸಂಖ್ಯೆ ಜಾಸ್ತಿಯಾಗುತ್ತಾ ಇದೆ.ಇದಕ್ಕೆ ಮುಖ್ಯ ಕಾರಣ ಬದಲಾದ ಜೀವನ ಶೈಲಿ ಎಂದು ತಿಳಿಸಿದರು.

ಜಾಹೀರಾತು

ಶಾಂತಿವನ ಟ್ರಸ್ಟ್‌ ನ ಯೋಗ ನಿರ್ದೇಶಕರಾದ ಡಾ. ಶಶಿಕಾಂತ್ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ 20 ತರಭೇತುದಾರರನ್ನು ಆಯ್ಕೆಗೊಳಿಸಿ ಮೂರು ದಿನಗಳ ಕಾಲ ತರಭೇತಿ ನೀಡಲಾಗುತ್ತದೆ. ತರಬೇತುದಾದರು ತಮ್ಮಗ್ರಾಮದಲ್ಲಿರುವ ಮಧುಮೇಹಿಗಳನ್ನು ಗುರುತಿಸಿ ಅವರಿಗೆ 9 ದಿನಗಳ ತರಬೇತಿ ನೀಡುತ್ತಾರೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ 3 ದಿನಗಳಲ್ಲಿ ಸಿಗುವ ತರಬೇತಿಯಿಂದ ಇಡೀ ಗ್ರಾಮಕ್ಕೆ ಕೊಡುಗೆ ನೀಡಿದಂತಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿವೇಕಾನಂದ ಸಂಸ್ಥೆಯ ಸಂಜಯ್ ಹಾಗೂ ಗೀತಾರಾಣಿ ತರಬೇತಿದಾರರಾಗಿ ಆಗಮಿಸಿದ್ದರು. ಹೇಮಲತಾ ಪ್ರಾರ್ಥಿಸಿದರು. ಜಯಂತಿ ಕಾರ್ಯಕ್ರಮ ನಿರೂಪಿಸಿ, ಸರಿತಾ ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ