ಭಾನುವಾರ ಕನ್ಯಾನದ ಬಾರ್ ಒಂದರ ಬಳಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕನ್ಯಾನ ಮರ್ತನಾಡಿ ನಿವಾಸಿಗಳಾದ ರಮೇಶ (35), ಚಂದ್ರಹಾಸ ಯಾನೆ ಚಂದ್ರ (30), ಸಚ್ಚು ಯಾನೆ ಸತೀಶ (25), ಸದಾಶಿವ (39), ನಾರಾಯಣ (28), ಮಾಧವ (46) ಬಂಧಿತ ಆರೋಪಿಗಳಾಗಿದ್ದಾರೆ.
ಭಾನುವಾರ ಮಧ್ಯಾಹ್ನ ಕನ್ಯಾನ ಬಾರ್ ಬಳಿಯಲ್ಲಿ ಮರ್ತನಾಡಿ ನಿವಾಸಿ ದಿನೇಶ್ (22) ಎಂಬವರು ನಿಂತಿರುವ ಸಂದರ್ಭ ಆರೋಪಿಗಳು ಹಲ್ಲೆ ನಡೆಸಿದ್ದಾಗಿ ಆಪಾದಿಸಲಾಗಿದೆ.