ಬಂಟ್ವಾಳ

ತುಂಬೆ ಅಣೆಕಟ್ಟು: ರೈತರಿಗೆ ಎರಡು ಕಂತಿನಲ್ಲಿ ಪರಿಹಾರ

bantwalnews.com

ತುಂಬೆ ಅಣೆಕಟ್ಟು ಎತ್ತರಿಸಿದ್ದರಿಂದ ಪ್ರಸ್ತುತ 4 ಗ್ರಾಮಗಳಲ್ಲಿ 18-20 ಎಕರೆ ಭೂಪ್ರದೇಶ ಮುಳುಗಡೆಯಾಗಲಿದ್ದು ಭೂಮಾಲಿಕರಿಗೆ ಒಟ್ಟು 16,25,080 ರೂ.ನ್ನು 2 ಕಂತಿನಲ್ಲಿ ನೀಡಲಾಗುವುದು ಎಂದು ಮನಪಾ ಆಯುಕ್ತ ಮೊಹಮ್ಮದ್ ನಜೀರ್ ತಿಳಿಸಿದ್ದಾರೆ.

ಜಾಹೀರಾತು

ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮನಪಾ ಕಾರ್ಪೋರೇಟರ್ ವಿಶ್ವನಾಥ ಪೂಜಾರಿ ನೇತೃತ್ವದಲ್ಲಿ  ನಗರ ಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್ ಅವರನ್ನು ಭೇಟಿ ಮಾಡಿ ನೂತನ ಡ್ಯಾಂ ನೀರು ಸಂಗ್ರಹಿಸಿ ರೈತರಿಗಾದ ಅನ್ಯಾಯ ಸರಿಪಡಿಸುವಂತೆ ಮನವಿ ಸಲ್ಲಿಸಿತು.

ಮನವಿಗೆ ಸ್ಪಂದಿಸಿದ ಆಯುಕ್ತರು 5 ಮೀ. ಎತ್ತರದ ಮುಳುಗಡೆ ಪ್ರದೇಶದ ಲಿಖಿತ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಮುಳುಗಡೆಗೊಳಗಾಗುವ ಸಂತ್ರಸ್ತ ರೈತರ ಸಭೆಗೆ ಅಹ್ವಾನಿಸಿ ಬಾರದ ಸಂತ್ರಸ್ತ ರೈತರ ಜಮೀನು ಜಲಾವೃತಗೊಂಡಲ್ಲಿ ಅಂತಹ ರೈತರು ತಹಶೀಲ್ದಾರ್ ಮತ್ತು ಆಯುಕ್ತರಿಗೆ ಲಿಖಿತ ಅರ್ಜಿ ನೀಡಿದ್ದಲ್ಲಿ ಅವರಿಗೂ ಮುಳುಗಡೆ ಭೂಮಿಗೆ ಪರಿಹಾರ ಬಾಡಿಗೆ ರೂಪದಲ್ಲಿ ನೀಡಲಾಗುವುದೆಂದು ತಿಳಿಸಿದರು.

ನಿಯೋಗದಲ್ಲಿ ಸಮಿತಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಎನ್.ಕೆ.ಇದಿನಬ್ಬ, ಪಿ.ಸುದೇಶ ಮಯ್ಯ, ಬಾಲಕೃಷ್ಣ ಗಟ್ಟಿ ಮೊದಲಾದವರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ