ಬಂಟ್ವಾಳ

ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ

ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ, ಮಿಲಾದ್ ರ್‍ಯಾಲಿ ನಡೆದವು.

ಪ್ರವಾದಿ ಜನ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಕೇಂದ್ರ ಜುಮಾ ಮಸೀದಿ ಮಿತ್ತಬೈಲ್‌ನಲ್ಲಿ ಬೃಹತ್ ಮೀಲಾದ್ ರ್‍ಯಾಲಿ ನಡೆಯಿತು. ರ್‍ಯಾಲಿಯನ್ನು ಅಲ್ ಹಾಜ್ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಉಸ್ತಾದ್ ಉದ್ಘಾಟಿಸಿದರು.

ಜಾಹೀರಾತು

ಮಸೀದಿಯ ಖತೀಬರಾದ ಖಲಿಲುರಹ್ಮಾನ್ ದಾರಿಮಿ, ಮುದರಿಸ್ ಅಬ್ದುಲ್ ಹಮೀದ್ ದಾರಿಮಿ, ಅಧ್ಯಕ್ಷ ಹಬೀಬುಲ್ಲಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ಹುಸೈನ್ ದಾರಿಮಿ, ಕೇಂದ್ರ ಮದರಸದ ಸದರ್ ಅಬ್ದುಲ್ ಹಮೀದ್ ದಾರಿಮಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.

ಪ್ರವಾದಿ ಜನ್ಮ ದಿನವನ್ನು ಸೋಮವಾರ ಫರಂಗಿಪೇಟೆ ಸಮೀಪದ ಕುಂಜತ್ಕಲ ನೂರುಲ್ ಹುದಾ ಮದರಸ ಹಾಗೂ ಮಸೀದಿಯಿಂದ ಆಚರಿಸಲಾಯಿತು. ಮದರಸದ ಸದರ್ ಉಸ್ತಾದ್ ದುಅ ನೆರವೇರಿಸಿದರು. ಅಧ್ಯಕ್ಷರು ಧ್ವಜಾರೋಹಣಗೈದರು. ವಿದ್ಯಾರ್ಥಿಗಳಿಂದ ಆಕರ್ಷಕ ರ್‍ಯಾಲಿ ನಡೆಯಿತು.

ಜಾಹೀರಾತು

 

ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆಯ ವತಿಯಿಂದ ಪ್ರವಾದಿ ಜನ್ಮ ದಿನಾಚರಣೆ ನಡೆಯಿತು.

ಜಾಹೀರಾತು

ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ವತಿಯಿಂದ ಸೋಮವಾರ ಪ್ರವಾದಿ ಜನ್ಮ ದಿನಾಚರಣೆ ನಡೆಯಿತು. ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ದುಅ ನೆರವೇರಿಸಿದರು. ಅಧ್ಯಕ್ಷ ಅಬೂಬಕ್ಕರ್ ಹಾಜಿ, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಅಬ್ದುಲ್ ಲತೀಫ್, ಮಾಜಿ ಅಧ್ಯಕ್ಷ ಟಿ.ಎಂ.ಮೂಸಬ್ಬ, ಪದಾಧಿಕಾರಿಗಳಾದ ಇಸಾಕ್, ರಶೀದ್, ಇಮ್ತಿಯಾಝ್, ಮುಹಿಯುದ್ದೀನ್, ಗ್ರಾಮ ಪಂಚಾಯತ್ ಸದಸ್ಯ ಝಹೂರು ಅಹ್ಮದ್ ಸಹಿತ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ