ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಹಾಕಿ ಕಡಿವಾಣ

ಬಂಟ್ವಾಳ: ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರದ ಆಶ್ರಯದಲ್ಲಿ  ಮಕ್ಕಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಬಿ.ಸಿ.ರೋಡಿನ ಸಂಸಾರ ಜೋಡುಮಾರ್ಗ ತಂಡ ಜಾಥಾ ನಡೆಸುತ್ತಿದೆ.

maunish3

ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿ, ಮಕ್ಕಳ  ಮೇಲಿನ ದೌರ್ಜನ್ಯ ಕ್ಕೆ  ಕಡಿವಾಣ ಬೀಳದ ಹೊರತು ನಮ್ಮದು ಸುಖೀ ರಾಜ್ಯವಾಗದು.. ಎನ್ನುವ ಸಂದೇಶ  ಸಾರುತ್ತಾ ಶಾಲೆಗಳಲ್ಲಿ ಸಾಗುತ್ತಿದೆ ಈ ತಂಡ.

ಜಾಹೀರಾತು

mausnish4

ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ 10 ಶಾಲೆಗಳಲ್ಲಿ ನಾಟಕ ಪ್ರದರ್ಶಿಸುತ್ತಿದೆ. ತಾಲೂಕಿನ ಅಮ್ಮುಂಜೆಯ ಅನುದಾನಿತ ಶಾಲೆಯಲ್ಲಿ ಶಾಲಾ ಮುಖ್ಯಶಿಕ್ಷಕಿಯವರು ತಮ್ಕಿ ಬಾರಿಸುವ ಮೂಲಕ ಜಾಗೃತಿ ಜಾಥಾ ಕ್ಕೆ ಚಾಲನೆ ನೀಡಿದರು.

ಜಾಥಾವು ನ.24 ರವರೆಗೆ ಮುನ್ನಡೆಯಲಿದೆ. ಪ್ರಜ್ಞಾ ಸಲಾಹಾ ಕೇಂದ್ರದ ಕೆಕೆಎಸ್ ಯೋಜನೆ ಸಂಯೋಜಕ ವಿಲಿಯಂ ಸ್ಯಾಮುವೆಲ್ ಅವರು ಜಾಥಾದ ನೇತೃತ್ವ ವಹಿಸಿದ್ದು, ಆಯಾ ವಲಯಗಳ ಪ್ರಜ್ಞಾ ಕಾರ್ಯಕರ್ತರು ಜಾಥಾಕ್ಕೆ ಸಾಥ್ ನೀಡುತ್ತಿದ್ದಾರೆ.

maunish2

ಮಕ್ಕಳ ನ್ನು ಭಿಕ್ಷಾಟನೆಗೆ ತಳ್ಳುವುದು, ಬಾಲಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ತಪ್ಪು ಎಂಬುದನ್ನು ಸಾರಿ ಹೇಳುವುದರ ಜೊತೆಗೆ ಮಕ್ಕಳ ಹಕ್ಕುಗಳ  ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂಬುದನ್ನು ನಾಟಕ ಮನನ ಮಾಡಿಕೊಡುತ್ತದೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಯಲ್ಲಿದ್ದರೂ, ಕೆಲವೆಡೆಗಳಲ್ಲಿ  ಮಕ್ಕಳ  ಹಕ್ಕುಗಳ ಉಲ್ಲಂಘನೆರಯಾಗುತ್ತಿದೆ, ಈ ಬಗ್ಗೆ ಪ್ರಜ್ಞಾವಂತನಾಗರೀಕರು ಎಚ್ಚೆತ್ತುಕೊಳ್ಳುವಂತೆ ನಾಟಕ ಗಮನಸೆಳೆಯುತ್ತದೆ.

ಮಕ್ಕಳು ಮೆಚ್ಚುವ ವಿದೂಷಕರ ಮಾತ್ರದ ಮೂಲಕವೇ ನಾಟಕವನ್ನು ಕಟ್ಟಲಾಗಿದ್ದು,  ಮಕ್ಕಳ ವಿಚಾರದಲ್ಲಿನ ಗಂಭೀರ ಸಮಸ್ಯೆಯನ್ನು ಎತ್ತಿ ಹಿಡಿಯುವುದರ ಜೊತೆಯಲ್ಲಿ ಎಲ್ಲರ ಮನಗೆಲ್ಲುವಲ್ಲಿಯೂ ನಾಟಕ ಯಶಕಂಡಿದೆ.  ಸಂಸಾರ ತಂಡದ ನಿರ್ದೇಶಕ ಮೌನೇಶ್ ವಿಶ್ವಕರ್ಮ, ಕಲಾವಿದರಾದ ಸಂದೀಪ್ ಸಾಲ್ಯಾನ್, ಪೃಥ್ವಿರಾಜ್, ವರದರಾಜ್, ಕೃತೇಶ್,ಲಾವಣ್ಯ, ಸ್ವಾತಿ ತಂಡದಲ್ಲಿದ್ದಾರೆ. ಅಮ್ಮುಂಜೆ ಹಾಗೂ ಬೆಂಜನಪದವಿನಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ಪ್ರಜ್ಞಾ ಕಾರ್ಯಕರ್ತರಾದ ಚಂದ್ರಶೇಖರ್, ಶೀಲಾವತಿ, ಅಶೋಕ್ ಉಪಸ್ಥಿತರಿದ್ದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಹಾಕಿ ಕಡಿವಾಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*