ಕಲ್ಲಡ್ಕ ಫ್ಲೈಓವರ್ ಅಡಿಯಲ್ಲಿ ಆಟೊ ಪಾರ್ಕಿಂಗ್ ಗೆ ಅವಕಾಶ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಎಂಎಸ್ ನ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ನೇತೃತ್ವದಲ್ಲಿ ಬಂಟ್ವಾಳ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಕ್ರಾಸ್ ಬಳಿ ಹಲವು ವರ್ಷಗಳಿಂದ ರಿಕ್ಷಾ ಪಾರ್ಕ್ ಇತ್ತು. ರಸ್ತೆ ಅಗಲೀಕರಣ ಹೊಂದುವ ಸಂದರ್ಭ ಪಾರ್ಕ್ ತೆರವಾಗಿದೆ. ಆದುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ರಿಕ್ಷಾ ಚಾಲಕರಿಗೆ ಫ್ಲೈ ಓವರ್ ಕೆಳಗೆ ರಿಕ್ಷಾ ಪಾರ್ಕ್ ನಿಲುಗಡೆಗೆ ಅನುಮತಿ ನೀಡಬೇಕಾಗಿ ಬಂಟ್ವಾಳ ತಾಲೂಕು ಉಪತಹಸೀಲ್ದಾರ್ ನರೇಂದ್ರನಾಥ್ ಮಿತ್ತೂರು ಅವರಿಗೆ ಮನವಿ ನೀಡಲಾಯಿತು.
ಈ ಸಂದರ್ಭ ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಬಂಟ್ವಾಳ ತಾಲೂಕು ರಿಕ್ಷಾ ಚಾಲಕ ಮಾಲಕರ ಅಧ್ಯಕ್ಷ ವಸಂತ್ ಕುಮಾರ್ ಮಣಿ ಹಳ್ಳ. ಉಪಾಧ್ಯಕ್ಷ ವಸಂತ್ ಕಲ್ಲಡ್ಕ ಜೊತೆ ಕಾರ್ಯದರ್ಶಿ ನವೀನ್ ಬಂಗೇರ ಪಣೀರ್, ಶ್ರೀರಾಮ್ ರಿಕ್ಷಾ ಪಾರ್ಕಿನ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.