JAYARAM
ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಘಟಕದ 2026ರಿಂದ 2031ನೇ ಅವಧಿಗೆ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು. ಚುನಾವಣಾಧಿಕಾರಿ ಉಮಾನಾಥ ರೈ ಮೇರಾವು ಪ್ರಕ್ರಿಯೆ ನಡೆಸಿಕೊಟ್ಟರು. ತಾಲೂಕು ಅಧ್ಯಕ್ಷರಾಗಿ ಜಯರಾಮ ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಯತೀಶ ಪಿ, ಖಜಾಂಜಿಯಾಗಿ ಇಸ್ಮಾಲಿ ಪಿ, ಉಪಾಧ್ಯಕ್ಷೆಯಾಗಿ ಶಶಿ ಬಿ, ಸಹಕಾರ್ಯದರ್ಶಿಯಾಗಿ ಮಮತಾ. ಪಿ, ಪುಟ್ಟುರಂಗನಾಥ. ಟಿ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪಾವತಿ ವೈ, ನಿರ್ದೇಶಕರಾಗಿ ಶಿವಪ್ರಸಾದ್ ಶೆಟ್ಟಿ, ಫ್ರಾನ್ಸಿಸ್ ಡೆಸಾ, ಸುನಿಲ್ ಸಿಕ್ವೇರ, ಸಂತೋಷ್ ಕುಮಾರ್ ತುಂಬೆ, ರವಿಕುಮಾರ್, ಸಂದೇಶ್ ಎಂ.ಎಸ್, ನೀತಾ ಗಟ್ಟಿ ಎಂ. ಆಯ್ಕೆಗೊಂಡಿದ್ದಾರೆ.
| ಪದ್ಯಾಣ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ದೃಢಕಲಶಾಭಿಷೇಕ (more…)