ಬಂಟ್ವಾಳ: ಭಾರತ್ ಗ್ಯಾಸ್ ಗೆ ಸಂಬಂಧಪಟ್ಟಂತೆ ಅಡುಗೆ ಅನಿಲ ವಿತರಣೆಯ ಕುರಿತು ಬಿಪಿಸಿಎಲ್ ಅಧಿಕಾರಿಗಳು ಬಂಟ್ವಾಳದ ಭಾರತ್ ಗ್ಯಾಸ್ ವಿತರಕರಾದ ಭದ್ರಾ ಗ್ಯಾಸ್ ಏಜನ್ಸಿಗೆ ದಿಢೀರ್ ಭೇಟಿ ನೀಡಿ, ವ್ಯವಸ್ಥೆಯ ಕುರಿತು ಪರಿಶೀಲಿಸಿ, ಗ್ರಾಹಕರೊಂದಿಗೆ ಮಾತುಕತೆ ನಡೆಸಿದರು.
ಬಿಪಿಸಿಎಲ್ ನ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ, ಮೆನೇಜರ್ ದರ್ಶಿಲ್ ಮಾಲವೀಯ ಭೇಟಿ ನೀಡಿ ವಿತರಣೆಯ ವಿಧಾನಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಹಕರೊಂದಿಗೆ ಅಡುಗೆ ಅನಿಲ ಪೂರೈಕೆ ವ್ಯವಸ್ಥೆ ಕುರಿತು ವಿಚಾರಿಸಿದರು. ಗ್ರಾಹಕರು ಯಾವುದೇ ವಿಷಯಕ್ಕೆ ಗಾಬರಿಗೊಂಡು ಅನಾವಶ್ಯಕವಾಗಿ ಅವಧಿಪೂರ್ವ ಬುಕ್ಕಿಂಗ್ ಮಾಡುವುದು ಬೇಡ, ಸಕಾಲಕ್ಕೆ ಸಿಲಿಂಡರ್ ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ವಿತರಣೆಗೆ ಬರುವವರಿಗೆ ಒಟಿಪಿ ಸಂಖ್ಯೆಯನ್ನು ನೀಡಿ ಸಹಕರಿಸುವ ಕುರಿತು ಅವರು ವಿವರಿಸಿದರು.