
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿ ಆರ್ಥಿಕವಾಗಿ ಅತಿ ದುರ್ಬಲ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಲಾಯಿತು. ಬಂಟ್ವಾಳ ತಾಲೂಕಿನ ಅತಿ ದುರ್ಬಲ 238 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವುಗಳ ಪೈಕಿ 11 ಕುಟುಂಬಗಳಿಗೆ ಕಿಟ್ ಹಸ್ತಾಂತರಿಸಲಾಯಿತು.
ಹೊಳ್ಳರಬೈಲು ಎಂಬಲ್ಲಿ ವಾಸಿಸುತ್ತಿರುವ ಅಮ್ಟಾಡಿ ಗ್ರಾಮದ ನಲ್ಕೆಮಾರು ಒಕ್ಕೂಟ ವ್ಯಾಪ್ತಿಗೆ ಒಳಪಡುವ ಶಾಂಭವಿ ಎಂಬವರು ಅಗ್ನಿ ಅವಘಡದಿಂದ ಮರಣ ಹೊಂದಿದ್ದು, ಅವರ ಪುತ್ರ ಪ್ರಶಾಂತ್ ಅನಾಥವಾಗಿದ್ದು, ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಇವರಿಗೆ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಕಿಟ್ ಹಸ್ತಾಂತರ ನೆರವೇರಿಸುವ ಮೂಲಕ ಚಾಲನೆ ನೀಡಿದರು. ವಾತ್ಸಲ್ಯ ಕಿಟ್ ನಲ್ಲಿ ದಿನಬಳಕೆ ವಸ್ತುಗಳು, ಪೌಷ್ಟಿಕ ಆಹಾರ ಸಾಮಗ್ರಿ, ಸ್ವಚ್ಛತಾ ಸಾಮಗ್ರಿಗಳು, ಮನೆ ಬಳಕೆ ವಸ್ತುಗಳು ಇರುತ್ತದೆ. ತಾಲೂಕು ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 238 ವಾತ್ಸಲ್ಯ ಕುಟುಂಬಗಳಿಗೆ ತಲಾ 1000 ರೂಗಳಂತೆ 2,38,000 ರೂಗಳ ಮಾಸಾಶನ ವಿತರಣೆ ಮಾಡಲಾಗುತ್ತಿದ್ದು, ಆರ್ಥಿಕ ಸಹಕಾರವನ್ನು ಒದಗಿಸಲಾಗುತ್ತಿದೆ. ಈ ಸಂದರ್ಭ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಒಕ್ಕೂಟದ ಅಧ್ಯಕ್ಷರಾದ ಥಾಮಸ್ ಸಲ್ದಾನಾ, ಮೇಲ್ವಿಚಾರಕರಾದ ಗಿರೀಶ್ ಮತ್ತು ಸೇವಾ ಪ್ರತಿನಿಧಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.



Be the first to comment on "ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ವಾತ್ಸಲ್ಯ ಕಿಟ್ ಹಸ್ತಾಂತರ"