ಕಡೇಶ್ವಾಲ್ಯ ಸಹಕಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಜಯಭೇರಿ, ತಳಮಟ್ಟದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ

ಬಂಟ್ವಾಳ: ಸಹಕಾರ ಭಾರತಿ ಬಂಟ್ವಾಳ ಮಂಡಲ, ಸಹಕಾರಿ ಪ್ರಕೋಷ್ಟ ಬಂಟ್ವಾಳ ಮಂಡಲ, ಬಿಜೆಪಿ ಬಂಟ್ವಾಳ ಮಂಡಲ ಹಾಗೂ ಬಿಜೆಪಿ ಕಡೇಶಿವಾಲಯ ಶಕ್ತಿ ಕೇಂದ್ರದ ಸಂಯೋಜಿತ ನಾಯಕತ್ವದೊಂದಿಗೆ ನಡೆದ ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಕಡೇಶ್ವಾಲ್ಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12ರಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ.

ಈ ಸಂದರ್ಭ ಪ್ರಕಟಣೆ ನೀಡಿರುವ ಶಕ್ತಿಕೇಂದ್ರದ ಅಧ್ಯಕ್ಷ ದೇವಿಪ್ರಸಾದ್ ಕಡೇಶಿವಾಲಯ, ಇದು ಯಾವುದೇ ಒಬ್ಬ ವ್ಯಕ್ತಿಯ ಗೆಲುವಲ್ಲ; ಇದು ನೆಲಮಟ್ಟದಲ್ಲಿ ದುಡಿದ ನಿಷ್ಠಾವಂತ ಕಾರ್ಯಕರ್ತರ ಶ್ರಮ, ತ್ಯಾಗ ಮತ್ತು ಏಕತೆಯ ಗೆಲುವಾಗಿದೆ. ಪಕ್ಷದ ಧ್ವಜವನ್ನು ಮನೆಮನೆಗೆ ತಲುಪಿಸಿ, ಮಳೆ–ಬಿಸಿಲು ಲೆಕ್ಕಿಸದೇ, ಯಾವುದೇ ಪ್ರಚಾರದ ಆಸೆಯಿಲ್ಲದೆ ದುಡಿದ ಕಾರ್ಯಕರ್ತರ ಪರಿಶ್ರಮಕ್ಕೆ ದೊರೆತ ಸಾರ್ಥಕ ಫಲವೆಂದು ಈ ಫಲಿತಾಂಶವನ್ನು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.  ಮಳೆ–ಬಿಸಿಲು, ಹಗಲು–ರಾತ್ರಿ ಎನ್ನದೇ ಮನೆಮನೆಗೆ ತೆರಳಿ ಪಕ್ಷದ ವಿಚಾರವನ್ನು ಜನರಿಗೆ ತಲುಪಿಸಿದ ಕಾರ್ಯಕರ್ತರ ಶ್ರಮವೇ ಈ ವಿಜಯದ ಮೂಲ ಶಕ್ತಿ. ಗ್ರಾಮೀಣ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲವಾಗಿ ನಿಂತಿದ್ದು, ಯಾವುದೇ ಸ್ವಾರ್ಥದ ಲೆಕ್ಕಾಚಾರವಿಲ್ಲದೆ, ಯಾವುದೇ ಸ್ಥಾನಮಾನಗಳ ನಿರೀಕ್ಷೆಯಿಲ್ಲದೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಈ ಚುನಾವಣೆಯ ನಿಜವಾದ ಶಿಲ್ಪಿಗಳಾಗಿದ್ದಾರೆ.  ಮತದಾರರನ್ನು ಜಾಗೃತಗೊಳಿಸುವುದರಿಂದ ಹಿಡಿದು, ಚುನಾವಣಾ ದಿನದವರೆಗೆ ಪ್ರತಿಯೊಂದು ಹಂತದಲ್ಲೂ ಕಾರ್ಯಕರ್ತರು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿದ್ದು, ಈ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

ಈ ಐತಿಹಾಸಿಕ ವಿಜಯಕ್ಕೆ ತಮ್ಮ ಅಮೂಲ್ಯವಾದ ಮತ ನೀಡಿ ಪಕ್ಷದ ಘನತೆಯನ್ನು ಹೆಚ್ಚಿಸಿದ ಎಲ್ಲಾ ಮತದಾರ ಬಂಧುಗಳಿಗೆ, ಹಾಗೂ ಈ ಸಂಪೂರ್ಣ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷದ ಗೌರವವನ್ನು ಕಾಪಾಡಿದ ಪ್ರತಿಯೊಬ್ಬ ಕಾರ್ಯಕರ್ತ ಬಂಧುವಿಗೂ ಪಕ್ಷದ ನಾಯಕತ್ವ ಕೃತಜ್ಞತೆ ಸಲ್ಲಿಸಿದೆ. ಜೊತೆಗೆ ಈ ಪ್ರಕ್ರಿಯೆಗೆ ದಿಕ್ಕು ನೀಡಿದ ಸಹಕಾರ ಭಾರತಿ, ಸಹಕಾರಿ ಪ್ರಕೋಷ್ಟ, ಬಿಜೆಪಿ ಬಂಟ್ವಾಳ, ಶಕ್ತಿಕೇಂದ್ರದ ಪದಾಧಿಕಾರಿಗಳಿಗೂ ಧನ್ಯವಾದವನ್ನು ಕಡೇಶಿವಾಲಯ ಶಕ್ತಿ ಕೇಂದ್ರದ ಅಧ್ಯಕ್ಷರಾದ ದೇವಿಪ್ರಸಾದ್ ತಿಳಿಸಿದ್ದಾರೆ. ನೂತನವಾಗಿ ಆಯ್ಕೆಯಾದ ನಿರ್ದೇಶಕರು, “ಈ ಜಯ ನಮ್ಮದೇ ಅಲ್ಲ, ನಮ್ಮಿಗಾಗಿ ದುಡಿದ ಕಾರ್ಯಕರ್ತರದು” ಎಂದು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಶ್ರಮಕ್ಕೆ ಗೌರವ ನೀಡುತ್ತಾ, ಸಂಘವನ್ನು ಇನ್ನಷ್ಟು ಪಾರದರ್ಶಕವಾಗಿ, ರೈತಪರವಾಗಿ ಹಾಗೂ ಅಭಿವೃದ್ಧಿಮುಖಿಯಾಗಿ ನಡೆಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಮಾದರಿ ಸಂಸ್ಥೆಯನ್ನಾಗಿ ರೂಪಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾಗಿ ಪ್ರಕಟಣೆಯಲ್ಲಿ ಶಕ್ತಿಕೇಂದ್ರದ ಅಧ್ಯಕ್ಷರು ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು

Be the first to comment on "ಕಡೇಶ್ವಾಲ್ಯ ಸಹಕಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಜಯಭೇರಿ, ತಳಮಟ್ಟದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*