ಕೃಷಿಕ ಸಮಾಜ ಕಟ್ಟಡ ಉದ್ಘಾಟನೆ, ಇಲಾಖಾ ಸವಲತ್ತು ವಿತರಣೆ

ಜಾಹೀರಾತು

ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡಲು ಕೃಷಿಕ ಸಮಾಜ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹೇಳಿದ್ದಾರೆ.ಬಿ.ಸಿ.ರೋಡಿನಲ್ಲಿ ನಿರ್ಮಿಸಲಾದ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಭವನ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಭವನದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸಭಾಭವನವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ಇಂದು ಭತ್ತವಷ್ಟೇ ಅಲ್ಲ, ಕೃಷಿಕರು ಲಾಭದಾಯಕ ಬೆಳೆಗಳತ್ತ ಮನ ಮಾಡುತ್ತಿದ್ದು, ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರು ಅಡಕೆ ಬೆಳೆಯಿಂದ ಆರ್ಥಿಕವಾಗಿ ಸಬಲರಾಗಿದ್ದಾರೆ. ಇದೀಗ ಕಾಫಿ ಬೆಳೆಯೂ ಈ ಮಣ್ಣಿಗೆ ಸೂಕ್ತವಾಗುತ್ತಿದೆ ಎಂಬ ಕುರಿತು ಅಧ್ಯಯನಗಳು ನಡೆಯಬೇಕು ಎಂದರು.

ಕೃಷಿಕ ಸಮಾಜದ ಆಡಳಿತಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಆರಂಭಗೊಂಡ ಕೃಷಿಕ ಸಮಾಜ ಬಲಗೊಳ್ಳಲು ಸರಕಾರದ ಸಹಾಯ ಅತ್ಯಗತ್ಯ ಎಂದರು.

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಜಿಪಂ ಮಾಜಿ ಸದಸ್ಯ ಪದ್ಮಶೇಖರ ಜೈನ್,  ಪ್ರಮುಖರಾದ ಎ.ಸಿ.ಭಂಡಾರಿ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ವಿಜಯ ಕುಮಾರ ರೈ, ಕೋಶಾಧಿಕಾರಿ ಚಂದ್ರಾ ಕೋಲ್ಚಾರ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪದ್ಮನಾಭ ರೈ, ಪದಾಧಿಕಾರಿಗಳಾದ ರಮಾನಾಥ ವಿಟ್ಲ, ಆಲ್ಬರ್ಟ್ ಮಿನೇಜಸ್, ಕೃಷಿ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಕೃಷಿಕ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು ಸ್ವಾಗತಿಸಿದರು. ಉಪಾಧ್ಯಕ್ಷ ಉಮ್ಮರ್ ಮಂಚಿ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ಫಲಾನುಭವಿಗಳ ಪಟ್ಟಿಯನ್ನು ತಾಂತ್ರಿಕ ಅಧಿಕಾರಿ ನಂದನ್ ಶೆಣೈ ವಾಚಿಸಿದರು. ಕೃಷಿ ಸಖಿ, ಪಶು ಸಖಿಯರನ್ನು ಗೌರವಿಸಲಾಯಿತು. ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು

ಫಲಾನುಭವಿಗಳಿಗೆ ಸವಲತ್ತು ವಿತರಣೆ:

ಪಿಎಂಕೆಎಸ್ ವೈ ತುಂತುರು ನೀರಾವರಿ ಘಟಕ ಯೋಜನೆಯಡಿ ಕೃಷಿ ಇಲಾಖೆಯಿಂದ 90 ಶೇಕಡಾ ಸಹಾಯಧನದಲ್ಲಿ ವಿತರಿಸಲಾಗುವ ಸ್ಪ್ರಿಂಕ್ಲರ್ ಸೆಟ್  ಅನ್ನು ಫಲಾನುಭವಿಗಳಾದ ಪ್ರಶಾಂತ್ ಭಟ್, ಸಂಜೀವ ಪೂಜಾರಿ, ವಿಲಾಸಿನಿ, ಗಣೇಶ್ ಶೆಟ್ಟಿಗಾರ್, ಫೆಲಿಕ್ಸ್ ಮೊರಾಸ್, ರವೀಂದ್ರ, ಗಿರಿಯಪ್ಪ ಪೂಜಾರಿ, ಲಾನ್ಸಿ ಮೇರಿ ಫೆರ್ನಾಂಡೀಸ್, ಅನಿಲ್ ಕ್ರಾಸ್ತಾ, ಮ್ಯಾಕ್ಸಿಂ ಫೆರ್ನಾಂಡೀಸ್, ಆನಂದ ಪೂಜಾರಿ, ಅಬುಬಕ್ಕರ್ ಅವರಿಗೆ ವಿತರಿಸಲಾಯಿತು. ಕೃಷಿ ಯಾಂತ್ರೀಕರಣ ಯೋಜನೆಯಡಿ ಔಷಧಿ ಸಿಂಪಡಿಸುವ ಪವರ್ ಸ್ಪ್ರೇಯರ್ ಯಂತ್ರವನ್ನು ಫಲಾನುಭವಿಗಳಾದ ಕೋಟ್ಯಪ್ಪ ನಾಯ್ಕ್ ಮತ್ತು ವಲೇರಿಯನ್ ಕ್ರಾಸ್ತಾ ಅವರಿಗೆ ನೀಡಲಾಯಿತು.

ಭತ್ತದ ಬೆಳೆ ಸ್ಪರ್ಧ ವಿಜೇತರಿಗೆ ಸನ್ಮಾನ:

ಕೃಷಿ ಇಲಾಖೆಯ 2024-25ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನಿಂದ ಕೃಷಿ ಪ್ರಶಸ್ತಿ ಭತ್ತ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮಹಿಳೆಯರ ವಿಭಾಗದಲ್ಲಿ ಹೆಕ್ಟೇರ್ ಗೆ 26.2 ಕ್ವಿಂಟಲ್ ಬೆಳೆದು ಪ್ರಥಮ ಸ್ಥಾನಿಯಾದ  ಬಂಟ್ವಾಳ ಹೋಬಳಿ ಕಾವಳಪಡೂರು ಗ್ರಾಮದ ಲೀಲಾ ಗೌಡ ಮತ್ತು ಮತ್ತು 26 ಕ್ವಿಂಟಲ್ ಭತ್ತದ ಇಳುವರಿ ಪಡೆದು ದ್ವಿತೀಯ ಸ್ಥಾನಿಯಾಗಿ ವಿಜೇತರಾದ ಕಾವಳಮೂಡೂರು ಗ್ರಾಮದ ಡಾಲಿ ವಿ.ಜೆ. ಅವರನ್ನು ಸನ್ಮಾನಿಸಲಾಯಿತು.

 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಕೃಷಿಕ ಸಮಾಜ ಕಟ್ಟಡ ಉದ್ಘಾಟನೆ, ಇಲಾಖಾ ಸವಲತ್ತು ವಿತರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*