ಇರ್ವತ್ತೂರು ಪದವು: ಯಶಸ್ವಿ ಚಾರಿಟೇಬಲ್ ಟ್ರಸ್ಟ್(ರಿ) ಆಸ್ತಿತ್ವಕ್ಕೆ

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಅನಿವಾಸಿ ಉದ್ಯಮಿ ನಾಸಿರ್ ಹುಸೈನ್ ಕಲಾಬಾಗಿಲು, ಸಮಾಜ ಸೇವಕ ಎಸ್.ಪಿ.ರಫೀಕ್ ರವರ ಸಾರಥ್ಯದಲ್ಲಿ ಯಶಸ್ವಿ ಚಾರಿಟೇಬಲ್ ಟ್ರಸ್ಟ್(ರಿ) ಆಸ್ತಿತ್ವಕ್ಕೆ ಬಂದಿದೆ.

ಗೌರವಾಧ್ಯಕ್ಷರು:ನಾಸಿರ್ ಹುಸೈನ್ ಕಲಾಬಾಗಿಲು

ಅಧ್ಯಕ್ಷರು:ಎಸ್.ಪಿ.ರಫೀಕ್

ಪ್ರಧಾನ ಕಾರ್ಯದರ್ಶಿ: ಸಿದ್ದೀಕ್ ಕಲಾಬಾಗಿಲು

ಇದರ ಪ್ರಥಮ ಸಭೆ ನಾಸಿರ್ ಹುಸೈನ್ ಕಲಾಬಾಗಿಲು ಅವರ ಅಧ್ಯಕ್ಷತೆಯಲ್ಲಿ, ಬಿ.ಜೆ.ಎಂ ಇರ್ವತ್ತೂರುಪದವು ಮಸೀದಿಯ‌ ಖತೀಬರಾದ ಗೌರವಾನ್ವಿತ ಉಮರ್ ಮದನಿಯವರ ದುಆ ಮತ್ತು ರಫೀಕ್ ಮದನಿಯವರ ಹಿತವಚನಗಳೊಂದಿಗೆ ಇರ್ವತ್ತೂರಿನ ಎಸ್.ಪಿ.ಕಾಟ್ಟೇಜ್ ನಲ್ಲಿ ನಡೆಯಿತು. ಪ್ರಥಮ 2024-2027ರ ಅವಧಿಗೆ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ನಾಸಿರ್ ಹುಸೈನ್ ಕಲಾಬಾಗಿಲು, ಗೌರವ ಸಲಹೆಗಾರರಾಗಿ ಅಮೀನ್ ಪಂಜೋಡಿ ಮತ್ತು ಎಸ್.ಪಿ.ಸಲೀಂ, ಅಧ್ಯಕ್ಷರಾಗಿ ಎಸ್ ಪಿ ರಫೀಕ್, ಉಪಾಧ್ಯಕ್ಷರಾಗಿ:ಮುಹಮ್ಮದ್ ಝಹೀರ್ ಎಡ್ತೂರ್ ಮತ್ತು ಫರೀದ್ ಅಹ್ಮದ್ ಎಡ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಕಲಾಬಾಗಿಲು, ಉಪಕಾರ್ಯದರ್ಶಿಯಾಗಿ ನಿಸಾರ್ ಬಿ.ಎಸ್.ನಗರಕೋಶಾಧಿಕಾರಿಯಾಗಿ ನಯಾಝ್ ಕಲಾಬಾಗಿಲು, ಹಾಗೂ ಟ್ರಸ್ಟ್ ನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಕಲಾಬಾಗಿಲು (ದುಬೈ), ಸುಲೈಮಾನ್ ಅಗಲೋಡಿ, ಹಾಮದ್ ಅಗಲೋಡಿ, ಹಂಝ‌ ಅಗಲೋಡಿ ,ಪಿ.ಎಚ್.ಅಬ್ಬಾಸ್ ಇರ್ವತ್ತೂರು ಪದವು, ಅಶ್ರಫ್ ಸುಪಾರಿ ಇರ್ವತ್ತೂರು ಪದವು, ಮನ್ಸೂರ್ ಇರ್ವತ್ತೂರು ಪದವು (ದುಬೈ), ಎಸ್.ಎಮ್.ವಸೀಂ ವಾಮದ ಪದವು, ಝಾಕಿರ್ ಹುಸೈನ್ ಇರ್ವತ್ತೂರು ಪದವು ,ನಿಸಾರ್ ಅಹ್ಮದ್ ಮಾಸ್ಟರ್ ಇರ್ವತ್ತೂರು ಪದವು ,ಝಹೀರ್ ಇರ್ವತ್ತೂರು ಪದವು,ಅಝರ್ ಪಂಜೋಡಿ ಮತ್ತು ಝಮೀರ್ ಇರ್ವತ್ತೂರು ಪದವು ಇವರು ಆಯ್ಕೆ ಯಾದರು.ಅನಿವಾಸಿ ಉದ್ಯಮಿ ನಾಸಿರ್ ಕಲಾಬಾಗಿಲು ಪ್ರಸ್ತಾವಿಕವಾಗಿ ಮಾತನಾಡಿದರು.ಸಿದ್ದೀಕ್ ಕಲಾಬಾಗಿಲು ಸ್ವಾಗತಿಸಿ, ಪ್ರಥಮ ಸಭೆಯ ಪ್ರಕ್ರಿಯೆ ನಡೆಸಿದರು.ನಿಸಾರ್ ಬಿ.ಎಸ್.ನಗರ ಇವರ ಧನ್ಯವಾದಗಳೊಂದಿಗೆ ಸಭೆಯು ಮುಕ್ತಾಯಗೊಂಡಿತು. 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಇರ್ವತ್ತೂರು ಪದವು: ಯಶಸ್ವಿ ಚಾರಿಟೇಬಲ್ ಟ್ರಸ್ಟ್(ರಿ) ಆಸ್ತಿತ್ವಕ್ಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*