ನಮ್ಮೂರು

ಗೀತಾಜಯಂತಿ ಪ್ರಯುಕ್ತ ಯೋಗನಿಧಿ ಪತಂಜಲಿ ಪ್ರತಿಷ್ಠಾನದಿಂದ ವಿವಿಧ ಸ್ಪರ್ಧೆಗಳು

ಮಂಗಳೂರಿನ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ (ರಿ.) ವತಿಯಿಂದ “ಗೀತಾ ಜಯಂತಿ” ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಸ್ಪರ್ಧೆಗಳನ್ನು ಆನ್ಲೈನ್ ಮೂಲಕ ಏರ್ಪಡಿಸಲಾಗಿದೆ.

ಜಾಹೀರಾತು

. ಗೀತಾ ಪಠಣ ಸ್ಪರ್ಧೆ: 5 ರಿಂದ 7ನೇ ತರಗತಿ- ಭಕ್ತಿ ಯೋಗ(12ನೇ ಅಧ್ಯಾಯ)ದ ಆರಂಭಿಕ 10 ಶ್ಲೋಕಗಳು. 8 ರಿಂದ 10ನೇ ತರಗತಿ – ಜ್ಞಾನ ವಿಜ್ಞಾನ ಯೋಗ (7ನೇ ಅಧ್ಯಾಯ)ದ ಆರಂಭಿಕ 10 ಶ್ಲೋಕಗಳು.ಪದವಿಪೂರ್ವವಿಭಾಗ- ವಿಭೂತಿ ಯೋಗ ( 10ನೇ ಅಧ್ಯಾಯ)ದ ಆರಂಭಿಕ 15 ಶ್ಲೋಕಗಳು., ಪದವಿ ವಿಭಾಗ- ಮೋಕ್ಷ ಸನ್ಯಾಸ ಯೋಗ (18ನೇ ಅಧ್ಯಾಯ )ದ ಆರಂಭಿಕ 15 ಶ್ಲೋಕಗಳು., ಸ್ನಾತಕೋತ್ತರ ವಿಭಾಗ- ವಿಶ್ವರೂಪ ದರ್ಶನ ಯೋಗ (11ನೇ ಅಧ್ಯಾಯ )ದ ಆರಂಭಿಕ 20 ಶ್ಲೋಕಗಳು., ಸಾರ್ವಜನಿಕ ವಿಭಾಗ- ಕರ್ಮಯೋಗ, (ಮೂರನೇ ಅಧ್ಯಾಯ)ದ ಆರಂಭಿಕ 10 ಶ್ಲೋಕಗಳು., ಭಾಗವಹಿಸುವವರು ಮೂರು ನಿಮಿಷದ ಪಠಣದ ವಿಡಿಯೋ ಮಾಡಿ 9632430012 ಈ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸುವಂತೆ ಸೂಚಿಸಿದೆ. ನಿಮ್ಮ ಹೆಸರು. ವಿಳಾಸವನ್ನು ತಿಳಿಸಬೇಕು., ವಿದ್ಯಾರ್ಥಿಗಳು ನಿಮ್ಮ ತರಗತಿ ಹಾಗೂ ಶಾಲಾ/ಕಾಲೇಜಿನ ವಿಳಾಸ ತಿಳಿಸಬೇಕು., ಕೊನೆಯ ದಿನಾಂಕ ಡಿಸೆಂಬರ್ 21, 2023.

ಕನ್ನಡ ಭಾಷಣ ಸ್ಪರ್ಧೆ:  5 ರಿಂದ 7ನೇ ತರಗತಿ- ಶ್ರೀಕೃಷ್ಣ – ಸುಧಾಮರ ಸ್ನೇಹ ವರ್ಣಿಸಿ. , 8ರಿಂದ 10ನೇ ತರಗತಿ- ಕಾಳಿಂಗ ಮರ್ದನ ಕೃಷ್ಣ , ಪದವಿಪೂರ್ವ  ಹಂತ- ಭಕ್ತಿಯೋಗದ ವೈಶಿಷ್ಟ್ಯ., ಪದವಿ ವಿಭಾಗ  “ಕರ್ಮಣ್ಯೇವಾಧಿಕಾಸ್ತೇ…..”  ಶ್ಲೋಕವನ್ನು ವಿಷದೀಕರಿಸಿ. , ಸ್ನಾತಕೋತ್ತರ ವಿಭಾಗ-  ಭಗವದ್ಗೀತೆಯಲ್ಲಿ ತ್ರಿಗುಣಗಳ ವರ್ಣನೆ., ಸಾರ್ವಜನಿಕ ವಿಭಾಗ- ಭಗವದ್ಗೀತೆ ಮನುಕುಲಕ್ಕೆ ವರದಾನ.

ಜಾಹೀರಾತು

ಭಾಷಣದ ಅವಧಿ ಮೂರು ನಿಮಿಷ. , ಭಾಷಣವನ್ನು ವಿಡಿಯೋ ಮಾಡಿ  ಹೆಸರು, ವಿಳಾಸ ಸಹಿತ, 9632430012 ಈ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು., ನಿಮ್ಮ ಹೆಸರು. ವಿಳಾಸವನ್ನು ತಿಳಿಸಬೇಕು., ವಿದ್ಯಾರ್ಥಿಗಳು ನಿಮ್ಮ ತರಗತಿ ಹಾಗೂ ಶಾಲಾ/ಕಾಲೇಜಿನ ವಿಳಾಸ ತಿಳಿಸಬೇಕು. ಕೊನೆಯ ದಿನಾಂಕ 2023ರ ಡಿಸೆಂಬರ್ 21.

ಪ್ರಬಂಧ ಸ್ಪರ್ಧೆ: 5ರಿಂದ 7ನೇ ತರಗತಿ: ಶ್ರೀಕೃಷ್ಣ ಜನ್ಮವೃತ್ತಾಂತ, 8ರಿಂದ 10ನೇ ತರಗತಿ: ಶ್ರೀಕೃಷ್ಣನ ಬಾಲ್ಯ ಕಥನ, ಪದವಿಪೂರ್ವ ವಿಭಾಗ:, ಭಗವದ್ಗೀತಾ ಸಾರ., ಪದವಿ ವಿಭಾಗ:ಸಾಂಖ್ಯಯೋಗ. ವಿಶ್ಲೇಷಿಸಿ.ಸ್ನಾತಕೋತ್ತರ ವಿಭಾಗ: ಪುರುಷೋತ್ತಮ ಯೋಗ- ಸಾರಾಂಶ. ಸಾರ್ವಜನಿಕ ವಿಭಾಗ: ವಿಷಯ: ಇಂದಿನ ಜೀವನದಲ್ಲಿ ಭಗವದ್ಗೀತೆಯ ಪ್ರಾಶಸ್ತ್ಯ. ಪ್ರಬಂಧಗಳನ್ನು ಎ4 ಅಳತೆಯ ಪೇಪರಲ್ಲಿ  ಮೂರು ಪುಟ ಮೀರದಂತೆ ಬರೆದು ಅಂಚೆ ಮೂಲಕ ಕಳುಹಿಸಬೇಕು. ನಿಮ್ಮ ಹೆಸರು. ವಿಳಾಸ , ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ಜತೆಯಲ್ಲಿರಿಸಿ ಕಳುಹಿಸಬೇಕು.  ವಿದ್ಯಾರ್ಥಿಗಳು ನಿಮ್ಮ ಹೆಸರು, ತರಗತಿ, ಶಾಲೆ/ ಕಾಲೇಜಿನ ವಿಳಾಸ ಪ್ರತ್ಯೇಕವಾಗಿ ಬರೆದು ತಿಳಿಸಿರಬೇಕು. ಪ್ರಬಂಧ ಹಾಗೂ ಇತರ ವಿವರಗಳನ್ನು ದಿನಾಂಕ ಡಿಸೆಂಬರ್ 21ರ ಒಳಗೆ ತಲುಪುವಂತೆ ಡಾ.ಸುಬ್ರಹ್ಮಣ್ಯ ಭಟ್, ವಿಜಯಶ್ರೀ ಚಿಕಿತ್ಸಾಲಯ. ಅಂಚೆ ಕಚೇರಿ ಎದುರು, ಮೊಗರ್ನಾಡು. ನರಿಕೊಂಬು ಅಂಚೆ, ಬಂಟ್ವಾಳ ತಾಲೂಕು. ದ.ಕ.ಜಿಲ್ಲೆ. 574231. ಈ ವಿಳಾಸಕ್ಕೆ ಕಳುಹಿಸಬೇಕು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts