ವಿಟ್ಲ

ವಾಲಿ ಸುಗ್ರೀವರ ಒಡ್ಡೋಲಗ: ವಿಡಿಯೋ ದಾಖಲೀಕರಣ

ತೆಂಕುತಿಟ್ಟು ಯಕ್ಷಗಾನವು ಈವರೆಗೆ ಹಲ ಕೆಲವು ತಿರುವುಗಳನ್ನು ಪಡೆದುಕೊಳ್ಳುವುದರೊಂದಿಗೆ, ಕೆಲವು ಪ್ರಮುಖ ಅಂಶಗಳನ್ನು ಕಳಕೊಂಡದ್ದೂ ಇದೆ. ಈ ಸಾಲಿನಲ್ಲಿ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವೂ ಒಂದು. ಸುಮಾರು 1950ನೇ ಇಸವಿಯಿಂದ ರಂಗವೇರದ ಈ ಒಡ್ಡೋಲಗ ಕ್ರಮವು ಅಳಿಯುವ ಅಂಚಿನಲ್ಲಿತ್ತು. ಇದರ ಗಂಭೀರತೆಯನ್ನು ಮನಗಂಡ ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ಅವರು ಈ ಕುರಿತು ಅಧ್ಯಯನ ಸಂಶೋಧನೆಗಳನ್ನು ನಡೆಸಿ ಅದರ ದಾಖಲಾತಿಗಾಗಿ ಶ್ರಮಿಸಿದರು.

ಜಾಹೀರಾತು

ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಕಲಾವಿದ  ಕೆ.ಗೋವಿಂದ ಭಟ್ ಸೂರಿಕುಮೇರಿಯವರ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಇತ್ತೀಚೆಗೆ ಇದರ ಪಾರಂಪರಿಕ ಪ್ರದರ್ಶನದ ಮೂಲಕ ವೀಡಿಯೋ ಚಿತ್ರೀಕರಣ ಮಾಡಿದರು. ಗೋವಿಂದ ಭಟ್ಟರ ಶಿಷ್ಯ  ಧರ್ಮೇಂದ್ರ ಆಚಾರ್ಯ ಕೂಡ್ಲು ಹಾಗೂ ಅವರ ಶಿಷ್ಯವೃಂದದವರು ಇದರಲ್ಲಿ ಸಂಪನ್ಮೂಲ ಕಲಾವಿದರಾಗಿ ಭಾಗವಹಿಸಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಮದ್ದಳೆವಾದನದಲ್ಲಿ ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಶುಭಶರಣ ತಾಳ್ತಜೆ, ಚೆಂಡೆವಾದನದಲ್ಲಿ ಮುರಾರಿ ಕಡಂಬಳಿತ್ತಾಯ ಮಂಗಳೂರು ಹಾಗೂ ಚಕ್ರತಾಳದಲ್ಲಿ ಕಿರಣ್ ಕುದ್ರೆಕೋಡ್ಳು ಸಹಕರಿಸಿದ್ದಾರೆ.

ಜಾಹೀರಾತು

 ಯಕ್ಷಗಾನ ಪರಂಪರೆಯ ‘ವಾಲಿ – ಸುಗ್ರೀವರ ಒಡ್ಡೋಲಗ’ ದಾಖಲೀಕರಣದ ಈ ವೀಡಿಯೋವನ್ನು ಮಧುಸೂದನ ಅಲೆವೂರಾಯರ ಪ್ರಸಿದ್ಧ ಯೂಟ್ಯೂಬ್ ಚಾನೆಲಿನ ಮೂಲಕ ಅಕ್ಟೋಬರ್ 19, 2023ನೇ ಗುರುವಾರದಂದು ಬೆಳಗ್ಗೆ ಗಂಟೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಬಿಡುಗಡೆ ಆಗಲಿದೆ.  ಕಸಾಪದ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಬಿಡುಗಡೆ ಮಾಡುವರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿದುಷಿ , ಮಂಗಳೂರು ನಾಟ್ಯ ಹಾಗೂ ಯಕ್ಷರಾಧನಾ ಕಲಾಕೇಂದ್ರ ದ ನಿರ್ದೇಶಕಿ ಸುಮಂಗಲಾ ರತ್ನಾಕರ್ ಭಾಗವಹಿಸುವರು.   ಈ ವೀಡಿಯೋ ದಾಖಲೀಕರಣದ ನಿರ್ದೇಶಕ ಕೆ.ಗೋವಿಂದ ಭಟ್ ಹಾಗೂ ಸಂಶೋಧಕ- ಸಂಯೋಜಕ ಕೆ.ಪಿ.ರಾಜಗೋಪಾಲ್ ಕನ್ಯಾನ ಅವರು ಉಪಸ್ಥಿತರಿರುವರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts