ವಿಟ್ಲ

ಇಂದಿನಿಂದ ಕೆ ಬಿ ಟಿ ಬಸ್ ಮತ್ತೆ ಸಂಚಾರ ಆರಂಭ

  • ಗಣೇಶ ಪ್ರಸಾದ ಪಾಂಡೇಲು

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಓಡಾಟ ಸ್ಥಗಿತಗೊಳಿಸಿದ್ದ ಪುತ್ತೂರು- ಮಂಜೇಶ್ವರ ನಡುವಣ  ಕೆ ಬಿ ಟಿ ಅಂತಾರಾಜ್ಯ ಸಾರಿಗೆ ಬಸ್ ಸಂಚಾರ ಇಂದಿನಿಂದ( ಸೆ. 21 ರ ಗುರುವಾರ) ಮತ್ತೆ  ಆರಂಭವಾಗಲಿದೆ ಎಂದು ಪ್ರಸ್ತುತ ಕೆ ಬಿ ಟಿ‌ ಬಸ್  ಮಾಲಕರಾಗಿರುವ ದೇವಂದಪಡ್ಪು ಐತಪ್ಪ ಶೆಟ್ಟಿ ತಿಳಿಸಿದ್ದಾರೆ

ಜಾಹೀರಾತು

ಮೂರೂವರೆ ವರ್ಷಗಳಿಂದ ಈ  ಬಸ್ ಓಡಾಟ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದರು‌ ಮಂಜೇಶ್ವರ ಮೀಯಪದವು, ಸುಂಕದಕಟ್ಟೆ ಆನೆಕಲ್ಲು ,ಕನ್ಯಾನ ವಿಟ್ಲ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ದೈನಂದಿನ ವ್ಯವಹಾರಕ್ಕೆ ಓಡಾಡುವ ಜನರು ಈ ಬಸ್ ಅನ್ನು ಆಶ್ರಯಿಸಿದ್ದರು‌ ಬಸ್ ಸಂಚಾರ ಸ್ಥಗಿತಗೊಂಡ ಬಳಿಕ‌ ಪರ್ಯಾಯ ವ್ಯವಸ್ಥೆಯೂ ಇರಲಿಲ್ಲ. ಬಸ್ ಪುನರ್ ಸಂಚಾರ ಜನರಿಗೆ ಖುಷಿ ತಂದಿದೆ ಮಂಜೇಶ್ವರದಿಂದ ಬೆಳಗ್ಗೆ  6.40  ಕ್ಕೆ ಹೊರಟು ಬೆಳಗ್ಗೆ 9 ಗಂಟೆಗೆ ಪುತ್ತೂರು ತಲುಪಲಿದೆ ಪುತ್ತೂರಿನಿಂದ ಬೆಳಗ್ಗೆ 10 .30 ಕ್ಕೆ ಬಸ್ ಹೊರಟು  ಮಧ್ಯಾಹ್ನ  ಒಂದು ಗಂಟೆಗೆ ಮಂಜೇಶ್ವರಕ್ಕೆ ತಲುಪಲಿದೆ. ಮಂಜೇಶ್ವರದಿಂದ 2.40  ಕ್ಕೆ ಹೊರಟು ಐದು ಗಂಟೆಗೆ ಪುತ್ತೂರು ತಲುಪಲಿದೆ.ಪುತ್ತೂರಿನಿಂದ ಸಂಜೆ 5.40 ಕ್ಕೆ ಹೊರಟು ರಾತ್ರಿ ಎಂಟು ಗಂಟೆಗೆ ಮಂಜೇಶ್ವರ ತಲುಪಲಿದೆ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts