ಬಂಟ್ವಾಳ: ಕಲ್ಲಡ್ಕದ ನೇತಾಜಿ ಯುವಕ ಮಂಡಲ ಮಹಾಸಭೆ ನಡೆದಿದ್ದು, ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆಯಾಯಿತು. ಅಧ್ಯಕ್ಷರಾಗಿ ಹರೀಶ್ ಕುಮಾರ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕೇಶವ ನಾಯ್ಕ ಮುರಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಕಲ್ಲಡ್ಕ, ಕ್ರೀಡಾಕಾರ್ಯದರ್ಶಿಯಾಗಿ ಸಂಪತ್ ಕುಮಾರ್, ಕೋಶಧಿಕಾರಿಯಾಗಿ ಸತೀಶ್ ಗೌಡ ಕೊಳಕೀರ್, ಜೊತೆ ಕಾರ್ಯದರ್ಶಿಯಾಗಿ ಧೀರಜ್ ಆಚಾರ್ಯ, ಗೌರವಾಧ್ಯಕ್ಷರಾಗಿ ನಾಗೇಶ ರಾಮನಗರ ಆಯ್ಕೆಯಾದರು ಪೂರ್ವಾಧ್ಯಕ್ಷ ರಾಜೀವ ಕೊಟ್ಟಾರಿ ಅಧಿಕಾರ ಹಸ್ತಾಂತರಿಸಿದರು. ಯುವಕ ಮಂಡಲದ ಸದಸ್ಯರೆಲ್ಲರೂ ಉಪಸ್ಥಿತರಿದ್ದು ಧನುಷ ಕಲ್ಲಡ್ಕ ಸ್ವಾಗತಿಸಿ ವಂದನಾರ್ಪಣೆಗೈದರು.