ಬಂಟ್ವಾಳ: ಲೋರೆಟ್ಟೋ ಸಮೀಪದ ಬಾರೆಕ್ಕಾಡಿನಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಯುವಕನೋರ್ವ ಮಲಗಿದ್ದಲೇ ಮೃತಪಟ್ಟ ಘಟನೆ ನಡೆದಿದೆ. ಬಾರೆಕ್ಕಾಡು ನಿವಾಸಿ ಧೀರಜ್(29) ಮೃತಪಟ್ಟ ಯುವಕ.
ರಾತ್ರಿ ಊಟ ಮಾಡಿ ಮಲಗಿದ್ದ ಯುವಕ ಬೆಳಗ್ಗೆ ಏಳದೇ ಇದ್ದು, ಗಾಬರಿಗೊಂಡ ಮನೆಯವರು ಆಸ್ಪತ್ರೆಗೆ ಕರೆ ತಂದಾಗ ಪರೀಕ್ಷಿಸಿದ ವೈದ್ಯರು ಆತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗೂಡ್ಸ್ ಆಟೋ ಚಾಲಕನಾಗಿ ದುಡಿಯುತ್ತಿರುವ ಬಾರಿಕ್ಕಾಡಿನ ನಾರಾಯಣ ಅವರ ಪುತ್ರನಾಗಿರುವ ಧೀರಜ್ ಕೂಡಾ ಗೂಡ್ಸ್ ಆಟೋ ಚಾಲಕನಾಗಿ ದುಡಿಯುತ್ತಿದ್ದು, ಅವಿವಾಹಿತನಾಗಿದ್ದ.