ನಿಮ್ಮ ಧ್ವನಿ

ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಕ್ರಾಸ್ ಬಳಿ ಎಚ್ಚರ!!! ರಸ್ತೆ ಪಕ್ಕ ಬಾಯ್ದೆರೆದಿದೆ ಹೊಂಡ!!

ಯಾರೋ ಅಗೆದು ಹೋಗಿದ್ದಾರೆ, ಮುಚ್ಚಿಯೂ ಇಲ್ಲ, ಕೆಲಸವೂ ಪ್ರಗತಿಯಲ್ಲಿಲ್ಲ. ಬಿ.ಸಿ.ರೋಡಿನ ಜೋಡುಮಾರ್ಗ ಪೋಸ್ಟ್ ಆಫೀಸ್, ಸಂಚಯಗಿರಿ, ಅಜ್ಜಿಬೆಟ್ಟು ಮೊದಲಾದೆಡೆ ತಿರುಗುವ ಅಜ್ಜಿಬೆಟ್ಟು ಕ್ರಾಸ್ ನ ರಸ್ತೆಯ ಪಕ್ಕದಲ್ಲೇ ರಸ್ತೆ ಅಗೆದು ಹೊಂಡ ಸೃಷ್ಟಿಯಾಗಿದೆ.

ಜಾಹೀರಾತು

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಬಸ್ಸುಗಳು ಮತ್ತೆ ಬಿ.ಸಿ.ರೋಡ್ ಕಡೆಗೆ ತಿರುಗಲು ಈ ಕ್ರಾಸ್ ಅನ್ನೇ ಉಪಯೋಗಿಸಬೇಕು. ಆ ಸಂದರ್ಭ ಹೊಂಡ ಭಾರೀ ತೊಡಕನ್ನು ಉಂಟುಮಾಡುತ್ತದೆ. ಗುರುವಾರ ಇಲ್ಲಿ ಕಾರೊಂದು ಬೀಳುವ ಹಂತದಲ್ಲಿರುವುದನ್ನು ಗಮನಿಸಿ ಎಚ್ಚರಿಸಿದ ಕಾರಣ ಅಪಾಯ ತಪ್ಪಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆಯನ್ನು ನಿರ್ಮಾಣ ಮಾಡುವ ಅಥವಾ ದುರಸ್ತಿಗೊಳಿಸುವ ಸಂದರ್ಭ ಅಥವಾ ಕುಡಿಯುವ ನೀರು ಪೈಪ್ ಲೈನ್ ಅಳವಡಿಕೆ ಸಂದರ್ಭ ಅಡಚಣೆಗಳು ಉಂಟಾಗುವುದು ಸಹಜ. ಆದರೆ ವಾರಗಟ್ಟಲೆ ಹೊಂಡ ಮಾಡಿ ಹೆದ್ದಾರಿಯ ಪಕ್ಕವೇ ಹಾಗೆಯೇ ಬಿಟ್ಟು ಹೋದರೆ, ಅಪಾಯ ತಪ್ಪಿದ್ದಲ್ಲ. ಇಲ್ಲೇ ಸನಿಹ ಮೂರು ದಿನಗಳ ಹಿಂದೆ ಕಾರೊಂದು ಡಿವೈಡರ್ ಗೆ ಗುದ್ದಿ ಓರ್ವ ಮೃತಪಟ್ಟಿದ್ದರು. ಇಂಥ ಘಟನೆಗಳು ಹಸಿರಾಗಿರುವ ಸಂದರ್ಭ ಇದಕ್ಕೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ