ಸರ್ಕಾರಿ ಕಚೇರಿ

ಬೆಳೆ ಸಮೀಕ್ಷೆ ಆಪ್ ಇನ್ನಷ್ಟು ಸರಳ

ಬಂಟ್ವಾಳ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ  ಕಾರ್ಯವು ೨೦೨೨-೨೩ನೇ ಸಾಲಿನಲ್ಲಿ ಪ್ರಾರಂಭಗೊಂಡಿದ್ದು ರೈತರೇ ಮೊಬೈಲ್ ಉಪಯೋಗಿಸಿ ಬೆಳೆ ಸಮೀಕ್ಷೆ  ಮಾಡುವ  ಆಪ್ ಅನ್ನು  ಸರಕಾರವು ಇನ್ನಷ್ಟು ಸರಳಗೊಳಿಸಿದೆ ಎಂದು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ ತಿಳಿಸಿದ್ದಾರೆ.

ಈ ಹಿಂದೆ ರೈತರ ಆಪ್‌ನಲ್ಲಿ ಗ್ರಾಮದ ಎಲ್ಲ ಸರ್ವೆ  ನಂಬರ್ ಡೌನ್‌ಲೋಡ್ ಆಗುತ್ತಿತ್ತು. ಪ್ರಸಕ್ತ ಆಧಾರ್ ಸಂಖ್ಯೆ  ನಮೂದಿಸುವ ಮೂಲಕ ಒಬ್ಬ ರೈತರ ಮಾತ್ರ ಪಹಣಿ (ಸರ್ವೇ ನಂ) ಡೌನ್‌ಲೋಡ್ ಆಗುತ್ತದೆ. ಇದಕ್ಕಾಗಿ ರೈತರಿಂದಲೇ  ಬೆಳೆ ಸಮೀಕ್ಷೆ ಕೈಗೊಳ್ಳಲು  ಅಭಿವೃದ್ಧಿ ಪಡಿಸಲಾಗಿದ್ದ ಈ  ಮೊಬೈಲ್ ಆಪ್‌ನಲ್ಲಿ  ಆಧಾರ್ ಸಂಖ್ಯೆ ದಾಖಲಿಸಿ ತದನಂತರ  ಆಧಾರ್‌ಗೆ  ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ  ಒಟಿಪಿ ಬರಲಿದೆ. ಒಟಿಪಿ ದಾಖಲಿಸಿದರೆ ಈ ಆಧಾರ್‌ಗೆ ಜೋಡಣೆಯಾಗಿರುವ  ಎಫ್‌ಐಡಿ ನಂಬರ್ ಮತ್ತು ಸರ್ವೇ ನಂಬರ್‌ಗಳು  ಡೌನ್ಲೋಡ್ ಆಗುತ್ತವೆ. ತಾಲೂಕಿನ  ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆಪ್‌ನಲ್ಲಿ ತಮ್ಮ ಜಮೀನಿನ  ಸರ್ವೇ  ನಂಬರ್‌ವಾರು  ಬೆಳೆ  ವಿವರವನ್ನು ನಿಖರವಾಗಿ ದಾಖಲಿಸಿ ಮುಂಗಾರು-೨೦೨೨ರ ಬೆಳೆ ಸಮೀಕ್ಷೆ ಕಾರ್ಯವನ್ನು  ಸಂಪೂರ್ಣವಾಗಿ  ಯಶಸ್ವಿಗೊಳಿಸಬೇಕೆಂದು  ಕೋರಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ