




ಬಂಟ್ವಾಳ: ತಾಲೂಕು ರಿಕ್ಷಾ ಚಾಲಕ ಮಾಲಕ ಸಂಘ (ಬಿಎಂಎಸ್)ದ ವತಿಯಿಂದ ೩ ನೇ ವರ್ಷದ ಕಟೀಲು ಕ್ಷೇತ್ರಕ್ಕೆ ಕಾಲ್ನಡಿಗೆ ಯಾತ್ರೆಗೆ ಶನಿವಾರ ಸಂಜೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು. ಸಂಘದ ಸದಸ್ಯರಾಗಿರುವ ಸುಮಾರು ನೂರು ಮಂದಿ ರಿಕ್ಷಚಾಲಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಭಾನುವಾರ ಮುಂಜಾನೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವನ್ನು ತಲುಪಿದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಎ. ಗೋವಿಂದ ಪ್ರಭು, ಅಧ್ಯಕ್ಷ ಸತೀಶ್ ಸಾಲ್ಯಾನ್, ಕಾರ್ಯದರ್ಶಿ ರವೀಂದ್ರ ಕೋಟ್ಯಾನ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಜಿಲ್ಲಾ ಜೊತೆ ಕಾರ್ಯದರ್ಶಿ ನಾರಾಯಣ ಕೆ. ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ಬಿಎಂಎಸ್ ಆಟೊ ಚಾಲಕ ಮಾಲಕರ ಸಂಘದಿಂದ ಕಟೀಲಿಗೆ ಕಾಲ್ನಡಿಗೆ ಯಾತ್ರೆ"