ಬಂಟ್ವಾಳ ತಾಲೂಕಿನ ರಾಯಿಯ ವಿವಿಧೆಡೆ ಬೂತ್ ಗಳ ಸಮಿತಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ ನಡೆಯಿತು. ವಿವರಗಳಿಗೆ ಮುಂದೆ ಓದಿರಿ.
ಭಾರತೀಯ ಜನತಾ ಪಾರ್ಟಿ ರಾಯಿ ಬೂತ್ ಸಂಖ್ಯೆ 29ರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಜಯಂತಿ ಪ್ರಯುಕ್ತ ವಿಶ್ವನಾಥ ಕುಲಾಲ್ ಹೋರಂಗಳ ಇವರ ಮನೆಯಲ್ಲಿ ಗಿಡ ನೆಟ್ಟು ಮತ್ತು ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಅಣ್ಣಳಿಕೆ ,ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಸಹಸಂಚಾಲಕರಾದ ಹರೀಶ ಆಚಾರ್ಯ ರಾಯಿ,ಬೂತ್ ಅಧ್ಯಕ್ಷರಾದ ಶಿವಪ್ರಸಾದ್ ಲಕ್ಷ್ಮೀಕೋಡಿ,ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಗೌಡ ಗೋಳಿತಬೆಟ್ಟು,ಸಂತೋಷ್ ಕುಮಾರ್ ರಾಯಿಬೆಟ್ಟು,ಶ್ರೀಮತಿ ಯಶೋದ,ಪ್ರಮುಖರಾದ ವಸಂತಗೌಡ ಮುದ್ದಾ ಜೆ,ವಿಶ್ವನಾಥ ಗೌಡ,ಅಜಿತ್ ಹೊರಾಂಗಳ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು,
ರಾಯಿ ಬೂತ್ ಸಮಿತಿ 30ರ ವತಿಯಿಂದ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನದ ಪ್ರಯುಕ್ತ ಬೂತ್ ಸಮಿತಿ ಅಧ್ಯಕ್ಷರಾದ ಶ್ರೀ ಸಂತೋಷ್ ಗೌಡ ಗೋಳಿತಬೆಟ್ಟುಇವರ ಮನೆಯಲ್ಲಿ ರಾಷ್ಟಸೇವಿಕಾ ಸಮಿತಿಯ ಪ್ರಾಂತ ಸಂಪರ್ಕ ಪ್ರಮುಖರಾದ ಮೀನಾಕ್ಷಿ ಮಾತಾಜೀ ರಾಯಿ ಪುಷ್ಪಾರ್ಚನೆ ಮಾಡಿ ಬೌದ್ಧಿಕ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮೋರ್ಚದ ಪ್ರಧಾನ ಕಾರ್ಯದರ್ಶಿಯಾದ ವಸಂತ ಕುಮಾರ್ ಅಣ್ಣಳಿಕೆ, ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಹಸಂಚಾಲಕರಾದ ಹರೀಶ್ ಆಚಾರ್ಯ ರಾಯಿ,ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ರಾಯಿ ಬೆಟ್ಟು,ಸಂತೋಷ್ ಗೌಡ ,ಪ್ರಮುಖರಾದ ಚಂದ್ರಶೇಖರ ಗೌಡ ಕಾರಂಬಡೆ ,ಪರಮೇಶ್ವರ ಪೂಜಾರಿ ರಾಯಿ,ಪವನ್ ಮಾಬೆಟ್ಟು,ಬೂತ್ ಸಮಿತಿ ಕಾರ್ಯದರ್ಶಿಯಾದ ನವೀನ್ ಕುಮಾರ್ ಸಾಲ್ಕೋಡಿ,ಹಾಗೂ ಪ್ರಮುಖ ಕಾರ್ಯಕರ್ತರು ಹಾಜರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ರಾಯಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ"
Be the first to comment on "ರಾಯಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ"